ADVERTISEMENT

ಹಾಸನ: ಗಾಂಜಾ ಗಿಡ ಬೆಳೆದಿದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 7:40 IST
Last Updated 13 ಸೆಪ್ಟೆಂಬರ್ 2020, 7:40 IST

ಹಾಸನ:ಮಡೆನೂರು ಕೃಷಿ ಸಂಶೋಧನಾಕೇಂದ್ರದ ವಸತಿ ಗೃಹದ ಹಿಂದೆ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಶಾಂತಿಗ್ರಾಮ ಪೋಲಿಸರು ಬಂಧಿಸಿದ್ದು, 4 ಕೆ.ಜಿ. ಹಸಿ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ.

ಸಾರಾಪುರ ವಸತಿಗೃಹದಲ್ಲಿ ವಾಸವಿರುವ ದಿನಗೂಲಿ ನೌಕರ ಕುಮಾರ (50) ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಆಧರಿಸಿ ಶಾಂತಿಗ್ರಾಮ ಠಾಣೆಯ ಪಿಎಸ್‌ಐ ಕೃಷ್ಣ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT