ADVERTISEMENT

ಸಕಲೇಶಪುರ: ಕಾಫಿ ತೋಟದಲ್ಲಿ ಪೈಪು, ಸ್ಪಿಂಕ್ಲರ್ ಕಳವು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 14:16 IST
Last Updated 27 ಮಾರ್ಚ್ 2024, 14:16 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಸಕಲೇಶಪುರ: ತಾಲ್ಲೂಕಿನ ಹಾಲಬೇಲೂರು ಗ್ರಾಮದ ಎಚ್‌.ಎಲ್‌. ತಿಮ್ಮಪ್ಪಶೆಟ್ಟಿ ಅವರ ಕಾಫಿ ತೋಟದಲ್ಲಿ ಕೆ.ಸಿ. ಮಂಜುನಾಥ್ ಎಂಬುವರು ಅಳವಡಿಸಿದ್ದ ₹12 ಸಾವಿರ ಮೌಲ್ಯದ 22 ಪಿವಿಸಿ ಪೈಪುಗಳನ್ನು ಸೋಮವಾರ ರಾತ್ರಿ ಕಳ್ಳರು ಕಳವು ಮಾಡಿದ್ದಾರೆ.

ಪಟ್ಟಣ ಪೊಲೀಸ್ ಠಾಣೆಗೆ ಕೆ.ಸಿ. ಮಂಜುನಾಥ್ ದೂರು ನೀಡಿದ್ದಾರೆ.

ತಾಲ್ಲೂಕಿನ ಬಾಗರಹಳ್ಳಿಯ ಪುಟ್ಟಸ್ವಾಮಿ ಅವರ ಸಿ.ಡಿ. ಸತ್ತಿಗಾಲ ಗ್ರಾಮದ ಕಾಫಿ ತೋಟದಲ್ಲಿ ನೀರು ಹಾಯಿಸಲು ಅಳವಡಿಸಿದ್ದ ₹16 ಸಾವಿರ ಮೌಲ್ಯದ ಸ್ಪಿಂಕ್ಲರ್ ಜೆಟ್‌ ಅನ್ನು ಕಳವು ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.