ADVERTISEMENT

ಹಿರೀಸಾವೆ: ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 13:03 IST
Last Updated 27 ಜೂನ್ 2023, 13:03 IST
ಹಿರೀಸಾವೆಯಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು. ರಾಜು, ವಾಸು, ಕೇಶವ್, ಗೋವಿಂದ್, ಹರೀಶ್, ಭರತ್ ಶೆಟ್ಟಿ ಇದ್ದರು
ಹಿರೀಸಾವೆಯಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು. ರಾಜು, ವಾಸು, ಕೇಶವ್, ಗೋವಿಂದ್, ಹರೀಶ್, ಭರತ್ ಶೆಟ್ಟಿ ಇದ್ದರು   

ಹಿರೀಸಾವೆ: ಇಲ್ಲಿನ ಒಕ್ಕಲಿಗರ ಸಮಾಜದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.

ಸಮಾಜದ ಮುಖಂಡರು ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ರಾಷ್ಟ್ರೀಯ ಹೆದ್ದಾರಿಯ ದಿಡಗ ಅಂಡರ್ ಪಾಸ್ ಬಳಿ ಇರುವ ವೃತ್ತದಲ್ಲಿ ಮುಂದಿನ ದಿನಗಳಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಲಾಗುವುದು. ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹೆಚ್ಚಿನ ಸಹಕಾರ ನೀಡುವಂತೆ ಮುಖಂಡ ಡಿ.ಎಸ್.ರಾಜು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಸಿ. ಕೇಶವ್ ಕೆಂಪೇಗೌಡರ ಮೂರ್ತಿಯನ್ನು ಮಾಡಿಸಿಕೊಡುವುದಾಗಿ ಹೇಳಿದರು.

ಉದಯಕುಮಾರ್, ಶ್ರೀಧರ್, ಬಾಲಕೃಷ್ಣ, ಕರವೇ ಯೋಗೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೇಮಂತ್, ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಮಂಜು, ಕಸಾಪ ಹೋಬಳಿ ಘಟಕದ ಆಧ್ಯಕ್ಷ ಪ್ರಮೋದ್, ಕರವೇ ಮಹೇಶ್, ಪ್ರಗತಿ ಶಂಕರ್, ಮಾರಿ ನಾಗರಾಜು, ಮುರುಳೀಧರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.