ADVERTISEMENT

ಪತ್ನಿಗೆ ಜಯ: ಪತಿ ಸೋಲು

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:08 IST
Last Updated 1 ಜನವರಿ 2021, 2:08 IST

ಆಲೂರು: ಬುಧವಾರ ನಡೆದ ಮತ ಎಣಿಕೆ ಕಾರ್ಯ ರಾತ್ರಿ 11 ರವರೆಗೆ ನಡೆಯಿತು ಎಂದು ತಹಶೀಲ್ದಾರ್ ಶಿರೀನ್‍ತಾಜ್ ತಿಳಿಸಿದ್ದಾರೆ.

ಮಲ್ಲಾಪುರ ಗ್ರಾ.ಪಂ.ಗೆ ಸೇರಿದ ಕಿತ್ತಗೆರೆ ಕ್ಷೇತ್ರದಿಂದ ಪತಿ ಚಂದ್ರಶೇಖರ್ ಸೋಲಪ್ಪಿದ್ದು, ಕಾಗನೂರು ಕ್ಷೇತ್ರದಿಂದ ಪತ್ನಿ ಸವಿತಾ ಚಂದ್ರಶೇಖರ್ ಜಯಗಳಿಸಿದ್ದಾರೆ.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪೃಥ್ವಿರಾಮ್ ಕಣತೂರು ಗ್ರಾಮ ಪಂಚಾಯಿತಿಯ ಮರಸು ಹೊಸಳ್ಳಿ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಪತ್ರಕರ್ತ ಬಿ.ಕೆ. ರಂಗಸ್ವಾಮಿ ಅವರ ಪತ್ನಿ ಸವಿತಾ ಭೈರಾಪುರ ಕ್ಷೇತ್ರದಿಂದ ಗೆದ್ದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.