ADVERTISEMENT

ಕೆವಿಜಿ ಬ್ಯಾಂಕ್ ಸಿಬ್ಬಂದಿ ಧರಣಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 7:50 IST
Last Updated 27 ಮಾರ್ಚ್ 2018, 7:50 IST

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಆರ್ಆರ್‌ ಬಿಇಎ ಮತ್ತು ಎಐಆರ್ಆರ್‌ಬಿಒಎ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ಪಾಲ್ಗೊಂಡ ಕಾರಣ ಬ್ಯಾಂಕ್‌ನ ಹಲವು ಶಾಖೆಗಳಲ್ಲಿ ಸೋಮವಾರ ವಹಿವಾಟು ವ್ಯತ್ಯಯಗೊಂಡಿತು.

ಜಿಲ್ಲೆಯ ಒಟ್ಟು 79 ಶಾಖೆಗಳ ಪೈಕಿ 9 ಬೀಗ ಹಾಕಿದರ, 14ರಲ್ಲಿ ವಹಿವಾಟು ನಡೆಯಲಿಲ್ಲ. ಉಳಿದಂತೆ ಶಾಖೆಗಳು ಕಾರ್ಯ ನಿರ್ವಹಿಸಿದವು ಎಂದು ಮೂಲಗಳು ತಿಳಿಸಿವೆ.

ಪಿಂಚಣಿ, ಬ್ಯಾಂಕ್ ಖಾಸಗೀಕರಣ, ಅನುಕಂಪ ಆಧಾರಿತ ನೌಕರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಧರಣಿ ನಡೆಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.