ADVERTISEMENT

ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 5:00 IST
Last Updated 24 ಸೆಪ್ಟೆಂಬರ್ 2011, 5:00 IST

ಶಿಗ್ಗಾವಿ: ವಿದ್ಯಾರ್ಥಿಗಳಲ್ಲಿ ಕ್ರಿಯಾ ಶೀಲತೆ ಬೆಳವಣಿಗೆಗೆ ಸಾಂಸ್ಕೃತಿಕ  ಸ್ಪರ್ಧೆ ಗಳು ಸ್ಪೂರ್ತಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಅದರ ಸದುಪಯೋಗ ಪಡೆ ಯಬೇಕು ಎಂದು ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು.

ಶಿಗ್ಗಾವಿ ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಎಸ್‌ಜಿ.ಸಜ್ಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ವಿ.ಎಚ್.ಪಾಟೀಲ, ಎಲ್.ಎಸ್.ಹಿರೇಮಠ ಹಾಗೂ ಎಂ.ವಿ. ಗಾಡದ ಮಾತನಾಡಿದರು. ಅಶೋಕ ಎಂ.ಆರ್. ಎಸ್.ಎಲ್.ದೊಡ್ಡಮನಿ,  ರಮಾಕಾಂತ ಭಟ್ಟ, ಎಸ್.ಎನ್.ತೀರ್ಥ, ಆರ್.ಜಿ.ಹಿರೇಮಠ, ವಿ.ಕೆ.ದೇಶಪಾಂಡೆ, ಎಂ.ಬಿ.ಪಾಟೀಲ, ಎಸ್.ಪಿ.ಬಳ್ಳಾರಿ, ಎಸ್.ಎಚ್.ಖವಾಸ ಮತ್ತಿತರರು ಉಪಸ್ಥಿತರಿದ್ದರು.

ಅನುರಾಧಾ ಬೇಂಡಿಗೇರಿ ಪ್ರಾರ್ಥಿಸಿ ದರು. ಪ್ರೊ. ಕೆ.ಎಸ್.ಬರದೇಲಿ ಸ್ವಾಗತಿ ಸಿದರು. ಕೆ.ಬಸಣ್ಣ ನಿರೂಪಿಸಿದರು. ಕೆ.ಸಿಹೂಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.