ADVERTISEMENT

ರಾಣೆಬೆನ್ನೂರು: 132 ಚೀಲ ಬೀಜ ವಶ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 17:07 IST
Last Updated 24 ಜೂನ್ 2021, 17:07 IST
ಕಮದೋಡ ಗ್ರಾಮದ ಹೊರವಲಯದ ಮನೆಯಲ್ಲಿ  ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹ 6 ಲಕ್ಷ ಮೌಲ್ಯದ 132 ಖುಲ್ಲಾ ಮೆಕ್ಕೆಜೋಳ ಬೀಜಗಳ ಚೀಲಗಳನ್ನು ಪೂರ್ವ ವಲಯ ದಾವಣಗೆರೆ ವಿಶೇಷ ತಂಡ ಗುರುವಾರ ದಾಳಿ ನಡೆಸಿ ವಶಪಡಿಸಿಕೊಂಡರು
ಕಮದೋಡ ಗ್ರಾಮದ ಹೊರವಲಯದ ಮನೆಯಲ್ಲಿ  ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹ 6 ಲಕ್ಷ ಮೌಲ್ಯದ 132 ಖುಲ್ಲಾ ಮೆಕ್ಕೆಜೋಳ ಬೀಜಗಳ ಚೀಲಗಳನ್ನು ಪೂರ್ವ ವಲಯ ದಾವಣಗೆರೆ ವಿಶೇಷ ತಂಡ ಗುರುವಾರ ದಾಳಿ ನಡೆಸಿ ವಶಪಡಿಸಿಕೊಂಡರು   

ರಾಣೆಬೆನ್ನೂರು: ತಾಲ್ಲೂಕಿನ ಕಮದೋಡ ಗ್ರಾಮದ ಹೊರವಲಯದ ಮನೆಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹6 ಲಕ್ಷ ಮೌಲ್ಯದ 132 ಖುಲ್ಲಾ ಮೆಕ್ಕೆಜೋಳ ಬೀಜಗಳ ಚೀಲಗಳನ್ನು ಪೂರ್ವ ವಲಯ ದಾವಣಗೆರೆ ವಿಶೇಷ ತಂಡ ಗುರುವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್, ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ, ಕೃಷಿ ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ ದಾಳಿಯಲ್ಲಿ ಭಾಗವಹಿಸಿದ್ದರು. ಹಲಗೇರಿ ಗ್ರಾಮೀಣ ಠಾಣೆ ಪಿಎಸ್‌ಐ ಮಂಜುನಾಥ ಕುಪ್ಪೇಲೂರ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT