
ಪ್ರಜಾವಾಣಿ ವಾರ್ತೆ
ಹಾವನೂರ ಗ್ರಾಮದ ಮೈಲಾರಲಿಂಗೇಶ್ವರ ಬಿಲ್ಲನೇರಿ ಗೊರವಯ್ಯ ಆನಂದ ಬಿಲ್ಲರ ಕಾರ್ಣಿಕ ನುಡಿದರು
ಗುತ್ತಲ: ಇಲ್ಲಿಗೆ ಸಮೀಪದ ಹಾವನೂರ ಗ್ರಾಮದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಭಾನುವಾರ ಸಂಜೆ ನಡೆಯಿತು.
ಗೊರವಯ್ಯ ಆನಂದ ಬಿಲ್ಲರ ಬಿಲ್ಲನ್ನೇರಿ ‘ಆಕಾಶ ಚಿಗುರಿ ಭೂಮಿ ತಂಪಾತಲೇ ಪರಾಕ್’ ಎಂದು ದೈವವಾಣಿ ನುಡಿದರು.
ಕಾರ್ಣಿಕ ಕೇಳಿದ ಭಕ್ತರು ದೈವವಾಣಿ ಬಗ್ಗೆ ವಿಶ್ಲೇಷಣೆ ಮಾಡಿದರು. ಈ ಬಾರಿ ಮಳೆ, ಬೆಳೆ. ಮುಂಬರುವ ಲೋಕಸಭಾ ಚುನಾವಣೆಯಿಂದ ಕೇಂದ್ರದಲ್ಲಿ ಯಾವ ಸರ್ಕಾರ ರಚನೆ ಆಗುತ್ತದೆ. ಕರ್ನಾಟಕ ಸರ್ಕಾರದ ಸ್ಥಿತಿಗತಿ ಎಲ್ಲ ದೈವವಾಣಿಯಲ್ಲಿ ಅಡಗಿರುತ್ತದೆ ಎಂದು ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.