
ಹಿರೇಕೆರೂರ: ‘ಅನ್ಯಾಯ ಮತ್ತು ಶೋಷಣೆ ವಿರುದ್ಧ ಹೋರಾಡಲು ಸಂಘಟನೆ ಅವಶ್ಯಕವಾಗಿದೆ. ಕನ್ನಡವನ್ನು ಉಳಿಸಿ– ಬೆಳೆಸುವ ಕಾರ್ಯ ಪ್ರತಿದಿನ ನಡೆಯಬೇಕು’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಕನಕದಾಸಎ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕೀರ್ತನಾ ಸಾಹಿತ್ಯದ ಮೂಲಕ ಕನಕದಾಸರು ಸಮಾಜದ ಲೋಪದೋಷ ತಿದ್ದಲು ಯತ್ನಿಸಿದ್ದರು’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಸಿಪಿಐ ಮಂಜುನಾಥ ಪಂಡಿತ್, ಶಂಬಣ್ಣ ಹಂಸಭಾವಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಲೋಹಿತಾಶ್ವರ ಓಲೇಕಾರ, ಉಪಾಧ್ಯಕ್ಷ ಅತಾವುಲ್ಲ ಎಂ., ಪ್ರಧಾನ ಕಾರ್ಯದರ್ಶಿ ಮಲ್ಲೇಶ ಲಮಾಣಿ, ಶಂಕ್ರಪ್ಪ ಬನ್ನಿಹಟ್ಟಿ, ಸಂತೋಷ್ ಎಂ., ಮಂಜುನಾಥ್ ಮಂಡಿಮಠ, ರಾಜು ಹರಿಜನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.