ಹಾವೇರಿ: ‘ಕೆಲವರು ಹೀಗೂ ಇರುತ್ತಾರೆ, ಮಾತಾಡೋದೇ ಅವರ ಕೆಲಸ. ಇದು ಅವರ ಹವ್ಯಾಸ. ಪಕ್ಷದಿಂದ ಈಗಾಗಲೇ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ನೋಟಿಸ್ ಜಾರಿಯಾಗಿದೆ. ಆದ್ರೆ ಕಲಿಯುವುದಿಲ್ಲ, ತಿಳಿದುಕೊಳ್ಳಲ್ಲ ಅಂದ್ರೆ ಏನು ಮಾಡೋದು? ಬಿಜೆಪಿ ಕಾರ್ಯಕರ್ತರು ಇದನ್ನ ಇಷ್ಟಪಡಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರನ್ನ ಎಲ್ಲ ಪಕ್ಷಗಳು ಗೌರವಿಸುತ್ತವೆ. ಬಿಜೆಪಿ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಇದು ಅವರಿಗೆ ಕಾಣುತ್ತಿಲ್ವಾ? ನಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಮಾಡಿದೆ ಅದು ಕಾಣ್ತಿಲ್ವ? ನೋಡಬೇಕಲ್ಲ, ಇದನ್ನೆಲ್ಲ ತಮ್ಮ ಸ್ಚಾರ್ಥಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.