ADVERTISEMENT

ಸವಣೂರು: ರಟ್ಟಿನಲ್ಲಿ ಮೂಡಿದ ಅಯೋಧ್ಯೆಯ ಶ್ರೀರಾಮ ಮಂದಿರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 15:49 IST
Last Updated 21 ಜನವರಿ 2024, 15:49 IST
ಸವಣೂರು ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ಯುವ ಪ್ರತಿಭೆ ಪ್ರವೀಣ ಹೊಳಲಪ್ಪ ಗುಡಗೇರಿ ರಟ್ಟಿನಲ್ಲಿ ನಿಮರ್ಾಣ ಮಾಡಿದ ಶ್ರೀರಾಮ ಮಂದಿರದ ಕಲಾಕೃತಿ.
ಸವಣೂರು ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ಯುವ ಪ್ರತಿಭೆ ಪ್ರವೀಣ ಹೊಳಲಪ್ಪ ಗುಡಗೇರಿ ರಟ್ಟಿನಲ್ಲಿ ನಿಮರ್ಾಣ ಮಾಡಿದ ಶ್ರೀರಾಮ ಮಂದಿರದ ಕಲಾಕೃತಿ.   

ಸವಣೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದ ಲೋಕಾರ್ಪಣೆ ಹಾಗೂ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ತಾಲ್ಲೂಕಿನಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಸೋಮವಾರ ಪೂಜಾ ವಿಧಿ ವಿಧಾನಕ್ಕೆ ತಯಾರಿ ಭರದಿಂದ ಸಾಗಿವೆ.

ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿ ಪ್ರವೀಣ ಹೊಳಲಪ್ಪ ಗುಡಗೇರಿ ರಟ್ಟನ್ನು ಬಳಸಿ ಕೇವಲ 20ದಿನಗಳ ಅವಧಿಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಪ್ರತಿಕೃತಿಯನ್ನು ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದಾನೆ

ಗ್ರಾಮದ ಗ್ರಾಮದೇವಿ ಹೊನ್ನಮ್ಮದೇವಿ, ಆಂಜನೇಯ ಸೇರಿದಂತೆ ವಿವಿಧ ದೇವರಿಗೆ ಸೋಮವಾರ ಪ್ರಾತಃಕಾಲ ಅಭಿಷೇಕ, ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.‌ ತಾಲ್ಲೂಕಿನ ಕಾರಡಗಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ , ಸಂಗೀತ ಸೇವೆ, ದೀಪೋತ್ಸವ, ಅನ್ನ ಸಂತರ್ಪಣೆ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.