ADVERTISEMENT

ಹಂಸಭಾವಿ: ₹8 ಲಕ್ಷ ಮೌಲ್ಯದ ಮೆಕ್ಕೆಜೋಳ ರಾಶಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 12:35 IST
Last Updated 4 ಜನವರಿ 2022, 12:35 IST
ಹಂಸಭಾವಿಯ ವಿರೂಪಾಕ್ಷಪ್ಪ ಕಲ್ಲತ್ತಿ ರೈತರ ಹೊಲದ ರಾಶಿ ಬೆಂಕಿಗೆ ಆಹುತಿಯಾಗಿರುವುದು
ಹಂಸಭಾವಿಯ ವಿರೂಪಾಕ್ಷಪ್ಪ ಕಲ್ಲತ್ತಿ ರೈತರ ಹೊಲದ ರಾಶಿ ಬೆಂಕಿಗೆ ಆಹುತಿಯಾಗಿರುವುದು   

ಹಂಸಭಾವಿ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ₹8 ಲಕ್ಷ ಮೌಲ್ಯದ ಮೆಕ್ಕೆಜೋಳದ ರಾಶಿ ಸುಟ್ಟು ಭಸ್ಮವಾದ ಘಟನೆ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ಬೆಂಕಿಗೆ ಆಹುತಿಯಾದ ಮೆಕ್ಕೆಜೋಳದ ರಾಶಿ ಹಂಸಭಾವಿಯ ವಿರೂಪಾಕ್ಷಪ್ಪ ಕಲ್ಲತ್ತಿ ಎಂಬ ರೈತರಿಗೆ ಸೇರಿದ್ದಾಗಿದೆ. 15 ಎಕರೆ ಜಮೀನಿನಲ್ಲಿ ಬೆಳೆದು, ಒಕ್ಕಲು ಮಾಡಲು ಗ್ರಾಮದ ಹೊರವಲಯದಲ್ಲಿ ರಾಶಿ ಹಾಕಿದ್ದರು.

ರಸ್ತೆಯಲ್ಲಿ ಹೋಗುವ ವಾಹನ ಸವಾರರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರೂ ಭಾಗಶಃ ಸುಟ್ಟು ಕರಕಲಾಗಿದೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ ಐ ದೇವರಾಜ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.