ADVERTISEMENT

ಕನಕದಾಸ ಉಣ್ಣೆ ನೇಕಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಗಾಜೀಗೌಡ್ರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 13:59 IST
Last Updated 4 ಡಿಸೆಂಬರ್ 2020, 13:59 IST
ಹಾವೇರಿ ನಗರದ ಕನಕದಾಸ ಉಣ್ಣೆ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್‍.ಎಫ್‍.ಎನ್ ಗಾಜೀಗೌಡ್ರ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾಲತೇಶ ಬಣಕಾರ ಅವರನ್ನು ಅಭಿನಂದಿಸಲಾಯಿತು
ಹಾವೇರಿ ನಗರದ ಕನಕದಾಸ ಉಣ್ಣೆ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್‍.ಎಫ್‍.ಎನ್ ಗಾಜೀಗೌಡ್ರ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾಲತೇಶ ಬಣಕಾರ ಅವರನ್ನು ಅಭಿನಂದಿಸಲಾಯಿತು   

ಹಾವೇರಿ: ನಗರದ ಕಾಗಿನೆಲೆ ರಸ್ತೆಯಲ್ಲಿರುವ ಕನಕದಾಸ ಉಣ್ಣೆ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್‍.ಎಫ್‍.ಎನ್ ಗಾಜೀಗೌಡ್ರ ಹಾಗೂ ಉಪಾಧ್ಯಕ್ಷರಾಗಿ ಮಾಲತೇಶ ಬಣಕಾರ ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಪ್ರಕಟಿಸಲಾಯಿತು ಎಂದು ಚುನಾವಣಾಧಿಕಾರಿ ಎನ್.ಎಸ್.ಕುಮ್ಮೂರ ತಿಳಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಎಸ್‍.ಎಫ್‍.ಎನ್ ಗಾಜೀಗೌಡ್ರ ಮಾತನಾಡಿ, ‘ಸಹಕಾರಿ ಕ್ಷೇತ್ರ ಬೆಳೆಯಲು ಎಲ್ಲರ ಸಹಕಾರ ಹಾಗೂ ಬೆಂಬಲ ಅಗತ್ಯವಿದೆ. ಸಂಘ ವಾರ್ಷಿಕ ಒಂದು ಕೋಟಿಗೂ ಹೆಚ್ಚು ವಹಿವಾಟು ನಡೆಸಲು ಸಂಘದ ಸದಸ್ಯರ ಸಹಕಾರ ಮುಖ್ಯವಾಗಿದೆ’ ಎಂದು ಹೇಳಿದರು.

ADVERTISEMENT

ಮುಖಂಡರಾದ ಭರಮಗೌಡ ಗಾಜೀಗೌಡ್ರ, ನಿಂಗಪ್ಪ ತುಕ್ಕಮ್ಮನವರ, ಅಶೋಕ ಬಣಕಾರ, ಶೇಖನಗೌಡ ಗಾಜೀಗೌಡ್ರ, ಮಲ್ಲೇಶ ಬಣಕಾರ, ಪ್ರಭುಗೌಡ ಗಾಜೀಗೌಡ್ರ, ದಿಳ್ಳೆಪ್ಪ ಗೋಣ್ಣಿ, ಸುಶೀಲಮ್ಮ ಗೋಣ್ಣಿ, ಕಾಮವ್ವ ಗೋಣ್ಣಿ, ಕೆಂಚಪ್ಪ ಚಿಕ್ಕಮ್ಮನವರ, ದಿಳ್ಳೆಪ್ಪ ಮಾಜಿ, ಕೈಮಗ್ಗ, ಜವಳಿ ಇಲಾಖೆ ಮತ್ತು ಖಾದಿ ಗ್ರಾಮೋದ್ದೋಗ ಮಂಡಳಿಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.