ADVERTISEMENT

ಸವನಿಧಿ ಆಯಿತಲೇ ಪರಾಕ್: ಗೊರವಯ್ಯ ಕಾರ್ಣಿಕ ನುಡಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 14:05 IST
Last Updated 28 ಫೆಬ್ರುವರಿ 2021, 14:05 IST
ಗೊರವಯ್ಯ ಕಾರ್ಣಿಕ ನುಡಿ
ಗೊರವಯ್ಯ ಕಾರ್ಣಿಕ ನುಡಿ   

ಗುತ್ತಲ: ಇಲ್ಲಿಗೆ ಸಮಿಪದ ಹಾವನೂರ ಗ್ರಾಮದಲ್ಲಿ ಭಾನುವಾರ ನಡೆದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ "ಸವನಿಧಿ ಆಯಿತಲೇ...ಪರಾಕ್" ಎಂದು ಗೊರವಯ್ಯ ಕಾರ್ಣಿಕ ನುಡಿದರು.

ಸವನಿಧಿ ಆಯಿತಲೇ.. ಎಂಬುವುದು ಸುಖ-ದುಃಖ ಮಳೆ, ಬೆಳೆ ಎಲ್ಲವೂ ಸಮನಾಗಿ ಸಾಗುತ್ತವೆ ಎಂದು ಅರ್ಥ ಕಲ್ಪಿಸುತ್ತದೆ ಎಂದು ಗ್ರಾಮದ ಹಿರಿಯರು ವಿಶ್ಲೇಷಿಸಿದರು.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಕಾರ್ಣಿಕ ಕೇಳಲು ಅವಕಾಶ ಸಿಗದ ಕಾರಣ ಹಾವನೂರು ಗ್ರಾಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬಂದಿದ್ದರು.

ADVERTISEMENT

ಭಕ್ತರು ಮಾಸ್ಕ್ ಧರಿಸದೆ ಅಂತರ ಕಾಯ್ದುಕೊಳ್ಳದೆ ಕಾರ್ಣಿಕ ಕೇಳಲು ಗುಂಪುಗೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.