ADVERTISEMENT

ಹಂಸಬಾವಿ: ಶರಣರ ಬದುಕಿನಲ್ಲಿ ಸನ್ಮಾರ್ಗ- ಮಲ್ಲಿಕಾರ್ಜುನ ಶ್ರೀ

ಹಂಸಬಾವಿ: ಶಿವಯೋಗೀಶ್ವರ ಆಶ್ರಮದಲ್ಲಿ ಪುರಾಣ ಆರಂಭೋತ್ಸವ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 16:23 IST
Last Updated 25 ಆಗಸ್ಟ್ 2024, 16:23 IST
ಹಂಸಬಾವಿಯ ಶಿವಯೋಗೀಶ್ವರ ಆಶ್ರಮದಲ್ಲಿ ಸಿದ್ದಲಿಂಗ ಸ್ವಾಮೀಜಿ ಪುರಾಣ ಪ್ರವಚನ ನೀಡಿದರು
ಹಂಸಬಾವಿಯ ಶಿವಯೋಗೀಶ್ವರ ಆಶ್ರಮದಲ್ಲಿ ಸಿದ್ದಲಿಂಗ ಸ್ವಾಮೀಜಿ ಪುರಾಣ ಪ್ರವಚನ ನೀಡಿದರು   

ಹಂಸಬಾವಿ: ‘ಭಗವಂತನ ಅನುಗ್ರಹವಿದ್ದರೆ ಬೆಟ್ಟದಷ್ಟು ಭಾರದ ಕಷ್ಟವಿದ್ದರೂ ಹೂವಿನಂತೆ ಹಗುರವಾಗುತ್ತದೆ. ಸುಖಮಯ ಜೀವನಕ್ಕೆ ಶರಣರ ಬದುಕನ್ನು ಅನುಸರಿಸಿ’ ಎಂದು ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.

ಇಲ್ಲಿನ ಶಿವಯೋಗೀಶ್ವರ ಆಶ್ರಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಶನಿವಾರ ಆರಂಭವಾದ ಸಜ್ಜಲಗುಡ್ಡದ ಶಿವಶರಣೆಯ ಪುರಾಣ ಪ್ರವಚನ ಪ್ರಾರಂಭೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಜೀವನದ ಸಾರ್ಥಕತೆಗೆ ಕೀರ್ತನೆ ಕೇಳಬೇಕು. ಸತ್ಸಂಗವಾಗಬೇಕು. ಶಿವಜ್ಞಾನವಿಲ್ಲದವರಿಗೆ ಶಿವನ ಕೃಪೆ ಲಭಿಸದು. ಸಂಸ್ಕಾರಯುತ ಜೀವನ ನಡೆಸಿದರೆ ಮೋಕ್ಷ ಸಾಧ್ಯ ಎಂದರು.

ADVERTISEMENT

ಹೂವಿನಹಡಗಲಿಯ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ದೀಪ ತಾನುರಿದು ಜಗಕೆ ಬೆಳಕು ನೀಡುವಂತೆ ಲೋಕಕಲ್ಯಾಣಕ್ಕಾಗಿ ಶರಣರು ಜೀವನ ಸವೆಸಿದರು. ಇಂಥವರ ಸಾಲಿನಲ್ಲಿ ಸಜ್ಜಗುಡ್ಡದ ಶರಣೆಯು ಮುಂಚೂಣಿಯಲ್ಲಿದ್ದಾಳೆ ಎಂದರು.

ಬಳಿಕ ಹಂಸಬಾವಿಯ ಸಿದ್ದಲಿಂಗ ಸ್ವಾಮೀಜಿ ಪುರಾಣ ಪ್ರವಚನ ಆರಂಭಿಸಿದರು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಈ ವೇಳೆ ಅಗಡಿಯ ಕಲ್ಮಠದ ಗುರುಸಿದ್ದ ಸ್ವಾಮೀಜಿ, ತಾ.ಶ.ಸಾ.ಪರಿಷತ್‌ ಅಧ್ಯಕ್ಷ ಜಿ.ಆರ್.ಕೆಂಚಕ್ಕನವರ, ಷಣ್ಮುಖಯ್ಯ ಮಳೀಮಠ, ಮಲ್ಲೇಶಪ್ಪ ಅಸುಂಡಿ, ಎ.ಎನ್.ಹೆಡಿಯಾಲ, ಧಾನೇಶ್ವರಿ ಭಜನಾ ಸಂಘದವರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.