ಹಾವೇರಿ: ಬ್ಯಾಡಗಿ ತಾಲ್ಲೂಕು ಕಾಗಿನೆಲೆ ಗ್ರಾಮದಚಾಂದಬಾಷಾ ಶಿಕಾರಿಪುರ ಎಂಬಾತನನ್ನು ಹಾವೇರಿ ಶಹರ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿ, ಆತನಿಂದ₹1.86 ಲಕ್ಷ ಮೌಲ್ಯದ 8 ಮೋಟಾರ್ ಸೈಕಲ್ಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ನಗರದ ಜಾನುವಾರು ಮಾರುಕಟ್ಟೆ ಸಮೀಪಪೊಲೀಸ್ ಸಿಬ್ಬಂದಿ ಗಸ್ತು ತಿರುಗುವ ವೇಳೆ,ಅನುಮಾನಾಸ್ಪದವಾಗಿ ಓಡಾಡುತ್ತಾ ಪೊಲೀಸರನ್ನು ನೋಡಿ ಓಡುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತನಿಖೆಯಲ್ಲಿ ಹಾವೇರಿ ಶಹರ ಪೊಲೀಸ ಠಾಣೆಯ ಪಿ.ಐ. ಪ್ರಭಾವತಿ ಸಿ ಶೇತಸನದಿ, ಪಿ.ಎಸ್.ಐ ಪಿ.ಜಿ ನಂದಿ, ಪ್ರೊಬೆಷನರಿ ಸಬ್ಇನ್ಸ್ಪೆಕ್ಟರ್ ಚಂದನ್ ಹಾಗೂ ಎಎಸ್ಐ ಆರ್.ವಿ. ಸೊಪ್ಪಿನ್ ಮತ್ತು ಕಾನ್ಸ್ಟೆಬಲ್ಗಳಾದ ಪಿ.ಕೆ ಕರಿಯಣ್ಣನವರ, ಚಂದ್ರಶೇಖರ್ ಪೂಜಾರ, ಎಂ.ಎಂ. ತುಂಗಳ, ಎಂ.ಜಿ ದೊಡ್ಡಕಾರಗಿ, ತಿಪ್ಪಣ್ಣನವರ, ಗುಡ್ಡಪ್ಪ ಹಳ್ಳೂರು, ರಾಜು ಗೊಂದೆರ, ಸುರೇಶ ಎಂ ಹೆಚ್, ವಿನಾಯಕ ಮಳವಳ್ಳಿ ಹಾಗೂ ಜೀಪ್ ಚಾಲಕ ಎಸ್.ಎ ಪವಾರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.