ಹಾವೇರಿ: ನಗರದ ಸರಸ್ವತಿ ಚಿತ್ರಮಂದಿರದ ಬಳಿ ಶುಕ್ರವಾರ ಸಂಜೆ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಶಾಲಾ ಮಕ್ಕಳಿಬ್ಬರನ್ನು ಸ್ಥಳೀಯ ವ್ಯಕ್ತಿಯೊಬ್ಬರು ರಕ್ಷಿಸಿದ್ದಾರೆ.
ಸಂಜೆ 5.30ರ ಸುಮಾರಿಗೆ ಮಕ್ಕಳಿಬ್ಬರು ಶಾಲೆ ಮುಗಿಸಿಕೊಂಡು ಮಳೆಯಲ್ಲೇ ಮನೆಗೆ ಮರಳುತಿದ್ದರು. ಈ ವೇಳೆ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯುತಿತ್ತು.
ಪಾದಚಾರಿ ಮಾರ್ಗದಿಂದ ಕೆಳಗೆ ಇಳಿಯುವ ವೇಳೆ ಮಕ್ಕಳು ಕಾಲು ಜಾರಿ ರಭಸವಾಗಿ ಹರಿಯುತಿದ್ದ ಆ ನೀರಿಗೆ ಬಿದ್ದರು. ತಕ್ಷಣ ರಕ್ಷಣೆಗೆ ಧಾವಿಸಿದ ಸ್ಥಳೀಯ ವ್ಯಕ್ತಿಯೊಬ್ಬರು, ಇನ್ನೇನು ಚರಂಡಿಯೊಳಗೆ ಹೋಗುತಿದ್ದ ಮಕ್ಕಳನ್ನು ಹಿಡಿದುಕೊಂಡು ಹೊರಗೆ ಎಳೆದರು.
ಆ ವ್ಯಕ್ತಿಯ ಸಮಯಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಪೋಷಕರೂ ಕೃತಜ್ಞತೆ ಸಲ್ಲಿಸಿದರು. ರಕ್ಷಣೆಯ ದೃಶ್ಯವನ್ನು ಯಾರೋ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಆ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.