ADVERTISEMENT

ಹಿರೇನಂದಿಹಳ್ಳಿ ಬಳಿ ಚಿರತೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 6:02 IST
Last Updated 14 ಆಗಸ್ಟ್ 2021, 6:02 IST

ಬ್ಯಾಡಗಿ: ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾಮದ ಬಳಿ ಗುರುವಾರ ಚಿರತೆಯೊಂದು ಧನಂಜಯ ಅಂಗಡಿ ಎಂಬುವರ ಮೇಕೆಯನ್ನು ಬೇಟೆಯಾಡಿದೆ. ಸುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕಳೆದ ಆ.7ರಂದು ಮಾಸಣಗಿ ಬಳಿ ಚಿರತೆ ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿ ಅದನ್ನು ಜೀವಂತ ಸೆರೆ ಹಿಡಿಯಲು ಬೋನ್‌ ಅಳವಡಿಸಿದ್ದರು. ಚಿರತೆ ಬಿದ್ದಿರುವ ಬಗ್ಗೆ ಕುತೂಹಲದಿಂದ ನೋಡಲು ನಿತ್ಯ ಬೋನ್‌ ಬಳಿ ತೆರಳುತ್ತಾರೆ. ಹೀಗಾಗಿ ಚಿರತೆ ಸೆರೆಸಿಕ್ಕಿಲ್ಲ, ಬೋನ್‌ ಬಳಿ ಜನರು ತೆರಳದಂತೆ ಮನವಿ ಮಾಡಿಕೊಳ್ಳಲಾಗಿದೆ.

ಮೇಕೆಯ ಮಾಲೀಕರಿಗೆ ಪರಿಹಾರದ ಹಣವನ್ನು ಸಂದಾಯ ಮಾಡುವುದಾಗಿ ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.