ಬ್ಯಾಡಗಿ: ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾಮದ ಬಳಿ ಗುರುವಾರ ಚಿರತೆಯೊಂದು ಧನಂಜಯ ಅಂಗಡಿ ಎಂಬುವರ ಮೇಕೆಯನ್ನು ಬೇಟೆಯಾಡಿದೆ. ಸುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕಳೆದ ಆ.7ರಂದು ಮಾಸಣಗಿ ಬಳಿ ಚಿರತೆ ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿ ಅದನ್ನು ಜೀವಂತ ಸೆರೆ ಹಿಡಿಯಲು ಬೋನ್ ಅಳವಡಿಸಿದ್ದರು. ಚಿರತೆ ಬಿದ್ದಿರುವ ಬಗ್ಗೆ ಕುತೂಹಲದಿಂದ ನೋಡಲು ನಿತ್ಯ ಬೋನ್ ಬಳಿ ತೆರಳುತ್ತಾರೆ. ಹೀಗಾಗಿ ಚಿರತೆ ಸೆರೆಸಿಕ್ಕಿಲ್ಲ, ಬೋನ್ ಬಳಿ ಜನರು ತೆರಳದಂತೆ ಮನವಿ ಮಾಡಿಕೊಳ್ಳಲಾಗಿದೆ.
ಮೇಕೆಯ ಮಾಲೀಕರಿಗೆ ಪರಿಹಾರದ ಹಣವನ್ನು ಸಂದಾಯ ಮಾಡುವುದಾಗಿ ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.