ADVERTISEMENT

ಹಾವೇರಿ: ಉತ್ತರದಲ್ಲಿ ಮಳೆ, ಬೆಳ್ಳುಳ್ಳಿ ದರ ಗಗನಕ್ಕೆ

ಕೆ.ಜಿ. ಈರುಳ್ಳಿ ಬೆಲೆ ₹60

ಮಂಜುನಾಥ ರಾಠೋಡ
Published 3 ಅಕ್ಟೋಬರ್ 2019, 19:45 IST
Last Updated 3 ಅಕ್ಟೋಬರ್ 2019, 19:45 IST
ಹಾವೇರಿ ಮಾರುಕಟ್ಟೆಯಲ್ಲಿ ಗುರುವಾರ ಬೆಳ್ಳುಳ್ಳಿ ವ್ಯಾಪಾರ
ಹಾವೇರಿ ಮಾರುಕಟ್ಟೆಯಲ್ಲಿ ಗುರುವಾರ ಬೆಳ್ಳುಳ್ಳಿ ವ್ಯಾಪಾರ   

ಹಾವೇರಿ: ಉತ್ತರದ ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾಳಾಗಿ ಬೆಲೆ ಗಗನಕ್ಕೇರಿದೆ. ನಗರದ ಮಾರುಕಟ್ಟೆಯಲ್ಲಿ ಗುರುವಾರ ಕೆ.ಜಿಗೆ ₹200 ರಂತೆ ಮಾರಾಟವಾಗುತ್ತಿತ್ತು.

ಆವಕ ಕಡಿಮೆಯಾದ ಪರಿಣಾಮ ಮಧ್ಯಪ್ರದೇಶದ ಬೆಳ್ಳುಳ್ಳಿಗೆ ಭಾರಿ ಬೇಡಿಕೆ ಬಂದಿದೆ. ರಾಣೆಬೆನ್ನೂರಿನ ಎಪಿಎಂಸಿ ಮಾರುಕಟ್ಟೆಗೆ ಉತ್ತರ ಭಾಗದಿಂದಲೇ ಆವಕವಾಗುತ್ತಿದೆ.

‘ಸ್ಥಳೀಯವಾಗಿ ಬೆಳ್ಳುಳ್ಳಿ ಬೆಳೆಯುವುದು ಕಡಿಮೆ. ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ ಹಾಗೂ ಮಧ್ಯಪ್ರದೇಶದಿಂದಲೇ ಹೆಚ್ಚಾಗಿ ರಾಣೆಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ಬೆಳ್ಳುಳ್ಳಿ ಆವಕ ಆಗುತ್ತದೆ. ಸದ್ಯ ಆ ಭಾಗಗಳಲ್ಲಿ ಮಳೆ ಪ್ರಮಾಣ ಹೆಚ್ಚಿರುವುದರಿಂದ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗಿದೆ’ ಎಂದು ವ್ಯಾಪಾರಿ ರಜಾಕ್‌ಸಾಬ್‌ ಬಾಗಲಕೋಟಿ ಹೇಳಿದರು.

ADVERTISEMENT

‘ರಾಣೆಬೆನ್ನೂರು ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಬೆಳ್ಳುಳ್ಳಿಗೆ ₹12 ರಿಂದ ₹14 ಸಾವಿರ ಇದೆ. ಬೆಳ್ಳುಳ್ಳಿ ಎಷ್ಟು ಬೇಕಾಗುತ್ತದೆಯೋ, ಅಷ್ಟನ್ನೇಖರೀದಿಸಿ ತರುತ್ತೇವೆ. ಹಿಂದಿನಂತೆ ಕೆಜಿಗಟ್ಟಲೇ ಖರೀದಿಸುವವರ ಸಂಖ್ಯೆ ಕಡಿಮೆ ಇದೆ. ನಾವು 250 ಗ್ರಾಂ ಬೆಳ್ಳುಳ್ಳಿಯನ್ನು ₹50 ರಂತೆ ಮಾರುತ್ತಿದ್ದೇವೆ. ಆದರೆ, ಗ್ರಾಹಕರು ₹30ಕ್ಕೆ ಕೇಳುತ್ತಾರೆ’ ಎಂದು ವ್ಯಾಪಾರಿ ಸುರೇಶಪ್ಪ ಹಾವೇರಿ ಬೇಸರ ವ್ಯಕ್ತಪಡಿಸಿದರು.

‘ಮಾರುಕಟ್ಟೆಗೆ ನಿಂಬೆಹಣ್ಣಿನ ಆವಕ ಹೆಚ್ಚಾಗಿದೆ. 4 ಚಿಕ್ಕ ನಿಂಬೆ ಹಣ್ಣಿಗೆ₹10, ದೊಡ್ಡ ನಿಂಬೆಗೆ ₹20 ರಂತೆ ಮಾರಾಟವಾಗುತ್ತಿದೆ. ಕೆ.ಜಿ.ಶುಂಠಿ ಬೆಲೆ ₹60ಕ್ಕೆ ಏರಿದೆ. ಕಳೆದ ವಾರ ₹60ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿಗೆ ಈ ವಾರವೂ ಅದೇ ದರವಿದೆ. ಟೊಮೆಟೊ ಆವಕ ಹೆಚ್ಚಾಗಿದ್ದರೂ, ₹20 ರಂತೆ ಮಾರಲಾಗುತ್ತಿದೆ. ಉಳಿದ ತರಕಾರಿ ಬೆಲೆ ಹಾಗೂ ಹಣ್ಣಿನ ಬೆಲೆ ಸ್ಥಿರವಾಗಿದೆ’ ಎಂದು ವ್ಯಾಪಾರಿ ಸುಲೇಮಾನ ಹಾಗೂ ಮೆಹಬೂಬಲಿ ದೇವಗಿರಿ ತಿಳಿಸಿದರು.

‘ಈ ವಾರ ಕೆ.ಜಿ ಆಲೂಗಡ್ಡೆ ₹20, ಮೆಣಸಿನಕಾಯಿ ₹30, ಬೆಂಡೆಕಾಯಿ ₹40, ಚವಳಿಕಾಯಿ ₹60, ಸೌತೆಕಾಯಿ ₹40, ಬೀನ್ಸ್‌ ₹40 ರಿಂದ ₹60, ಹಿರೇಕಾಯಿ ₹40, ಹಾಗಲಕಾಯಿ ₹40, ಬದನೆಕಾಯಿ (ಮುಳಗಾಯಿ)₹40, ಡೊಣ್ಣ ಮೆಣಸು ₹40, ಕ್ಯಾಬೇಜ್‌ ₹20, ಹೂಕೋಸು ₹30 ಇದೆ’ ಎಂದು ತರಕಾರಿ ವ್ಯಾಪಾರಿ ಅಬ್ದುಲ್‌ಗನಿ ತಿಳಿಸಿದರು.

‘ಸೇಬು ಕೆ.ಜಿಗೆ ₹100, ಚಿಕ್ಕು ₹60, ಮೊಸಂಬಿ ₹100, ದಾಳಿಂಬೆ ₹100, ಕಿತ್ತಳೆ ₹100, ದ್ರಾಕ್ಷಿ ₹120, ಸೀತಾಫಲ ₹100 ಇದೆ. ಡಜನ್‌ ಏಲಕ್ಕಿ ಬಾಳೆ ₹30, ಪಚ್ಚೆ ಬಾಳೆ ₹40 ಇದೆ’ ಎಂದು ವ್ಯಾಪಾರಿ ದಾವಲ್‌ಸಾಬ್‌ ತಿಳಿಸಿದರು.

* ₹200 ದಾಟಿದ ಬೆಳ್ಳುಳ್ಳಿ ಬೆಲೆ
* ಹಣ್ಣು, ತರಕಾರಿ ಬೆಲೆ ಸ್ಥಿರ
* ಕೆ.ಜಿ ಈರುಳ್ಳಿ ದರ ₹ 60

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.