ADVERTISEMENT

ಮೌನ ಅನುಷ್ಠಾನ ಸಂಪನ್ನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 14:48 IST
Last Updated 22 ಜೂನ್ 2020, 14:48 IST
ಹಾವೇರಿ ನಗರದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರ ಮೌನ ಅನುಷ್ಠಾನ ಸೋಮವಾರ ಸಂಪನ್ನಗೊಂಡ ಸಂದರ್ಭ ಭಕ್ತರು ಪುಷ್ಪಾಭಿಷೇಕ ಮಾಡಿದರು 
ಹಾವೇರಿ ನಗರದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರ ಮೌನ ಅನುಷ್ಠಾನ ಸೋಮವಾರ ಸಂಪನ್ನಗೊಂಡ ಸಂದರ್ಭ ಭಕ್ತರು ಪುಷ್ಪಾಭಿಷೇಕ ಮಾಡಿದರು    

ಹಾವೇರಿ: ನಗರದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರುಜ್ಯೇಷ್ಠ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಕೈಗೊಂಡ ಮೌನ ಅನುಷ್ಠಾನ ಸೋಮವಾರ ಸಂಪನ್ನಗೊಂಡಿತು.

ನಂತರ ಶ್ರೀಗಳು ಭಕ್ತರಿಗೆ ದರ್ಶನ ಭಾಗ್ಯ ನೀಡಿದರು. ಭಕ್ತರು ಸ್ವಾಮೀಜಿಗೆ ಪುಷ್ಪಾರ್ಚನೆ ಮಾಡಿ ಆಶೀರ್ವಾದ ಪಡೆದರು.ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಹಾಗೂ ಕೂಡಲದ ಗುರು ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.

ಸದಾಶಿವ ಸ್ವಾಮೀಜಿ, ಪಟ್ಟಾಭಿಷೇಕವಾದ ನಂತರ 10 ವರ್ಷಗಳಿಂದ ಪ್ರತಿವರ್ಷ ಒಂದು ತಿಂಗಳು ಮೌನಾನುಷ್ಠಾನವನ್ನು ಕೈಗೊಂಡು ಆಧ್ಯಾತ್ಮಿಕ ಸಾಧನೆಯಲ್ಲಿ ನಿರತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಭಕ್ತರ ದರ್ಶನಾಶೀರ್ವಾದದಿಂದ ದೂರ ಉಳಿಯುವ ಸ್ವಾಮೀಜಿ ಸಂಪೂರ್ಣ ಘನ ಆಹಾರ ತ್ಯಜಿಸಿ, ಕೇವಲ ಇಷ್ಟಲಿಂಗ ಪೂಜೆ ಹಾಗೂ ಮೌನ ಅನುಷ್ಠಾನದಲ್ಲಿ ತೊಡಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.