ADVERTISEMENT

ಕಲಬುರ್ಗಿಯಲ್ಲಿ ಅಧಿಕಾರಿ ಜಗದೇವಪ್ಪ ಮುಗುಟ ಮನೆ ಮೇಲೆ ಎಸಿಬಿ ದಾಳಿ 

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 7:00 IST
Last Updated 16 ಜೂನ್ 2020, 7:00 IST
ಕಲಬುರ್ಗಿಯ ಪೂಜಾ ಕಾಲೊನಿಯಲ್ಲಿರುವ ಜಗದೇವಪ್ಪ ಮುಗಟ ಅವರ ಮನೆ
ಕಲಬುರ್ಗಿಯ ಪೂಜಾ ಕಾಲೊನಿಯಲ್ಲಿರುವ ಜಗದೇವಪ್ಪ ಮುಗಟ ಅವರ ಮನೆ   

ಕಲಬುರ್ಗಿ: ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಮುಗುಟ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಜಗದೇವಪ್ಪ ಅವರ ಕಲಬುರ್ಗಿಯ ಪೂಜಾ ಕಾಲೊನಿಯಲ್ಲಿರುವ ಮನೆ, ವಾಣಿಜ್ಯ ಸಂಕೀರ್ಣ, ಯಾದಗಿರಿಯ ಕಚೇರಿ , ಬೀದರ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.

ಯಾದಗಿರಿ ಎಸಿಬಿ ಡಿವೈಎಸ್ಪಿ ಗುರುನಾಥ ಮತ್ತೂರ, ಕಲಬುರ್ಗಿ ಡಿವೈಎಸ್ಪಿ ಸುಧಾ ಆದಿ, ಬೀದರ್ ಡಿವೈಎಸ್ಪಿ ಬಷಿರೋದ್ದೀನ್ ಪಟೇಲ್, ಇನ್ಸ್ಪೆಕ್ಟರ್ ಗಳಾದ ಜಿ.ಎಸ್.ಬಿರಾದಾರ, ಶರಣಬಸಪ್ಪ ಕೂಡ್ಲಾ ದಾಳಿ ನೇತೃತ್ವ ವಹಿಸಿದ್ದಾರೆ.

ADVERTISEMENT

40ಕ್ಕೂ ಹೆಚ್ಚು ಸಿಬ್ಬಂದಿ ದಾಖಲೆ ಪರಿಶೀಲನೆ‌ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.