ಕಲಬುರಗಿ: ಇದೇ ಏಪ್ರಿಲ್ 22ರಂದು ಮೈಸೂರು ರಂಗಾಯಣದಿಂದ ಕಲಬುರಗಿಯ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಹಾನಾಟಕ 'ಪರ್ವ' ಪ್ರದರ್ಶನ ಮುಂದೂಡಲಾಗಿದೆ.
ಅಂದು ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಗದಿಯಾದ ಕಾರಣ ನಾಟಕ ಮುಂದೂಡಲಾಗಿದ್ದು, ಶೀಘ್ರವೇ ಮತ್ತೆ ಪ್ರದರ್ಶನದ ದಿನಾಂಕ ತಿಳಿಸಲಾಗುವುದು.
ಈಗಾಗಲೇ ಟಿಕೆಟ್ ಪಡೆದವರು ಟಿಕೆಟ್ ಹಿಂತಿರುಗಿಸಿ ಹಣ ವಾಪಸ್ ಪಡೆಯಲು ರಂಗಾಯಣಕ್ಕೆ ಸಂಪರ್ಕಿಸಬೇಕು ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮತ್ತು ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.