ಚಿಂಚೋಳಿ: ಬಿಜೆಪಿ ಮುಖಂಡ ಹಾಗೂ ಉದ್ಯಮಿ ಅಶೋಕ ಮೊಗದಂಪುರ ಅವರ ಜನ್ಮದಿನ ಪ್ರಯುಕ್ತ ಬುಧವಾರ ತಾಲ್ಲೂಕಿನ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರದಲ್ಲಿ ಕಲಬುರಗಿಯ ಜಿಮ್ಸ್ ರಕ್ತನಿಧಿ ಕೇಂದ್ರಕ್ಕೆ 45 ಮಂದಿ ರಕ್ತದಾನ ಮಾಡಿದರು. ತಾಲ್ಲೂಕು ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ.ಮಹಮದ್ ಗಫಾರ್, ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ಎಎಂಒ ಡಾ.ಬಾಲಾಜಿ ಪಾಟೀಲ, ಉದ್ಯಮಿ ಅಶೋಕ ಮೊಗದಂಪುರ, ಗ್ರಾ.ಪಂ.ಮಾಜಿ ಅಧ್ಯಕ್ಷ ಗೋಪಾಲ ಬ್ಯಾಗೇರಿ, ಸುಜಾತಾ ರಮೇಶ ಸಂಕಟಿ ಹಾಗೂ ಅಂತಪ್ಪ, ಚಾಂಟಿ ಬಾಯಕಾಡಿ, ಶೇಖರ ಮಾಮಿಡಗಿ, ರಿಯಾಜ್, ಗೋವರ್ಧನ, ಖದೀರ್, ಸಂಗಮೇಶ, ಅಮರ ಲೊಡ್ಡನೋರ್ ಹಾಗೂ ಜಿಮ್ಸ್ನ ಡಾ.ಮಮತಾ ಪಾಟೀಲ, ಮಲ್ಲಿಕಾರ್ಜುನ ಪರೀಟ್, ಶಬ್ಬೀರ್, ಶಿರಾಜುದ್ದಿನ್ ಮತ್ತು ಜಾಕೀರ್ ಮೊದಲಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.