ADVERTISEMENT

ಚಿತ್ತಾಪುರ | ಬಹಾರಪೇಠ ತಾಂಡಾದಲ್ಲಿ ವಿದ್ಯುತ್‌ ದುರಂತ: ₹10 ಲಕ್ಷ ಪರಿಹಾರಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 6:03 IST
Last Updated 16 ಜೂನ್ 2023, 6:03 IST
ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್‌
ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್‌   

ಚಿತ್ತಾಪುರ: ಪಟ್ಟಣದ ಬಹಾರಪೇಠ ತಾಂಡಾದಲ್ಲಿ ಜೂ.12 ರಂದು ರಾತ್ರಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಂಪತಿಗೆ ತಲಾ ₹5 ಲಕ್ಷದಂತೆ ಒಟ್ಟು ₹10 ಲಕ್ಷ ಪರಿಹಾರವನ್ನು ಕಲಬುರಗಿ ಜೆಸ್ಕಾಂ ಇಲಾಖೆ ಮಂಜೂರು ಮಾಡಿ ಆದೇಶಿಸಿದೆ.

ಸಂಬಂಧಿಕರ ಮನೆಯ ಹತ್ತಿರ ವಿದ್ಯುತ್ ಸ್ಪರ್ಶದಿಂದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಏವೂರು ತಾಂಡಾದ ಶಿವು ಕಿಶನ್ ರಾಠೋಡ್, ತಾರಾಬಾಯಿ ಶಿವು ರಾಠೋಡ್ ಅವರು ಸಾವನ್ನಪ್ಪಿದ್ದರು.

ಮೃತಪಟ್ಟವರ ವಾರಸುದಾರರ ಪ್ರಮಾಣ ಪತ್ರ ಪಡೆಯಬೇಕು. ಇಲಾಖೆಯಿಂದ ಪರಿಹಾರ ಧನ ಪಡೆದ ಮೇಲೆ ಹೆಚ್ಚಿನ ಪರಿಹಾರ ಕೋರಿ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವುದಿಲ್ಲ ಎಂದು ಅವಲಂಬಿತರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಬೇಕು ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪೆನಿ ನಿಯಮಿತದ ಅಧಿಕ್ಷಕ ಎಂಜಿನಿಯರ್ ಅವರು ಆದೇಶ ಮಾಡಿದ್ದಾರೆ.

ADVERTISEMENT

ಗಾಯಾಳುಗಳಿಗೂ ಪರಿಹಾರ ನೀಡಿ: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ದಂಪತಿ ಕುಟುಂಬಕ್ಕೆ ಜೆಸ್ಕಾಂ ಇಲಾಖೆ ಪರಿಹಾರ ಧನ ಮಂಜೂರು ಮಾಡಿ ಆದೇಶ ಮಾಡಿದಂತೆ ಘಟನೆಯಲ್ಲಿ ಗಾಯಗೊಂಡಿರುವ ರೂಪಸಿಂಗ್ ಮತ್ತು ಕಿರಣ ಅವರಿಗೂ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ರಾಮದಾಸ್ ಚವಾಣ್ ಅವರು ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗಾಯಾಳುಗಳಿಗೆ ಪರಿಹಾರ ಧನ ನೀಡುವಂತೆ ಜೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.