ಕಲಬುರ್ಗಿ: ತಾಯಿ ಪ್ರಯಾಣಿಸುತ್ತಿದ್ದ ಬಸ್ ಮಗಳನ್ನು ಬಲಿ ಪಡೆದ ಹೃದಯ ವಿದ್ರಾವಕ ಘಟನೆ ಆಳಂದ ತಾಲ್ಲೂಕಿನ ಝಳಕಿ ಸಮೀಪ ಮಂಗಳವಾರ ಸಂಭವಿಸಿದೆ.
ಮದಗುಣಕಿ ಗ್ರಾಮದ ಪ್ರೀತಿ ಜಮಾದಾರ (12) ಅಪಘಾತದಲ್ಲಿ ಮೃತಪಟ್ಟ ಬಾಲಕಿ.
ಬಾಲಕಿಯ ತಂದೆ–ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲಕಿಯು ಮದಗುಣಕಿ ಗ್ರಾಮದಲ್ಲಿ ಅಜ್ಜಿಯ ಮನೆಯಲ್ಲಿದ್ದು 7ನೇ ತರಗತಿ ಓದುತ್ತಿದ್ದಳು. ಹಬ್ಬ ಮಾಡಲೆಂದು ಬಾಲಕಿಯ ತಂದೆ ಮಲ್ಲಿನಾಥ ಜಮಾದಾರ, ತಾಯಿ ಶಿವಲಿಂಗಮ್ಮ ಗ್ರಾಮಕ್ಕೆ ಬಂದಿದ್ದರು. ಶಿವಲಿಂಗಮ್ಮ ಕೆಲಸಕ್ಕೆ ಸೇರಿಕೊಳ್ಳಲು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು.ಅವರನ್ನು ಬಸ್ನಲ್ಲಿ ಹತ್ತಿಸಿ, ತಂದೆ–ಮಗಳು ಬೈಕ್ನಲ್ಲಿ ಬಸ್ ಮುಂದೆ ತೆರಳುತ್ತಿದ್ದರು.
ಆಳಂದ ಡಿಪೊಕ್ಕೆ ಸೇರಿದ ಸೊಲ್ಲಾಪುರ–ಕಲಬುರ್ಗಿ ಬಸ್ ವೇಗವಾಗಿ ಬಂದು ಹಿಂದಿನಿಂದ ಡಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡ ಮಗಳು, ಹೆತ್ತವರೆದುರೇ ಕೊನೆಯುಸಿರೆಳೆದಳು. ಮಲ್ಲಿನಾಥ, ಬೈಕ್ನಲ್ಲಿ ಕುಳಿತಿದ್ದ ಬಾಲಕ ಸುನಿಲ್ಕುಮಾರ್ ಜಮಾದಾರಗೆ ಗಾಯಗಳಾಗಿವೆ. ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದು, ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.