ADVERTISEMENT

ಸಾಲಬಾಧೆಗೆ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 7:47 IST
Last Updated 6 ಅಕ್ಟೋಬರ್ 2025, 7:47 IST
ಶಾಂತಪ್ಪ ತಳವಾರ
ಶಾಂತಪ್ಪ ತಳವಾರ   

ಚಿಂಚೋಳಿ: ಸಾಲದ ಬಾಧೆ ತಾಳದೆ ತಾಲ್ಲೂಕಿನ‌ ಬೆಡಕಪಳ್ಳಿ ಗ್ರಾಮದ ರೈತ ಶಾಂತಪ್ಪ ರಾಯಪ್ಪ ತಳವಾರ (40) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅತಿವೃಷ್ಟಿಯಿಂದ ಹೊಲದಲ್ಲಿ ಹೆಸರು‌ಬೆಳೆ ಸಂಪೂರ್ಣ ಹಾಳಾಗಿದ್ದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಗರಗಪಳ್ಳಿ ಪಿಕೆಪಿಎಸ್‌ನಲ್ಲಿ  ₹1ಲಕ್ಷ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸುಲೇಪೇಟ ಶಾಖೆಯಲ್ಲಿ ₹80 ಸಾವಿರ ಸಾಲವಿದೆ ಎಂದು ತಿಳಿದು ಬಂದಿದೆ. ಪತ್ನಿ ಮಲ್ಲಮ್ಮ‌ನೀಡಿದ ದೂರಿನ ಅನ್ವಯ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT