ಕಲಬುರಗಿ: ‘ಅಗತ್ಯಬಿದ್ದರೆ ಡಿಸೆಂಬರ್ನಲ್ಲಿ ಶಿಕ್ಷಕರ ನೇಮಕಾತಿಗೆ ಮತ್ತೊಮ್ಮೆ ಸಿಇಟಿ ಪರೀಕ್ಷೆ ನಡೆಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಅಫಜಲಪುರ ತಾಲ್ಲೂಕಿನದೇವಲಗಾಣಗಾಪುರದಲ್ಲಿ ಮಾತ ನಾಡಿದ ಅವರು,‘ಸರ್ಕಾರ ಈಗಾಗಲೇ 15 ಸಾವಿರ ಹುದ್ದೆಗೆ ಸಿಇಟಿ ಪರೀಕ್ಷೆ ನಡೆಸಿದೆ. ನಿಗದಿತ ಪ್ರಮಾಣದಲ್ಲಿ ಶಿಕ್ಷಕರು ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ, ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.