ADVERTISEMENT

₹ 5.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 6:44 IST
Last Updated 9 ಸೆಪ್ಟೆಂಬರ್ 2025, 6:44 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕಲಬುರಗಿ: ತಾಲ್ಲೂಕಿನ ನಂದೂರ (ಕೆ) ತಾಂಡಾದ ನಿವಾಸಿ ಧರ್ಮಪಾಲ ಕಿಶನ ರಾಠೋಡ ಎಂಬುವವರ ಮನೆಯ ಬಾಗಿಲು ಮುರಿದ ಕಳ್ಳರು ಅಲ್ಮೇರಾದಲ್ಲಿ ಇರಿಸಿದ್ದ ಒಂದು ತೊಲೆ ಮಂಗಳಸೂತ್ರ, ಒಂದು ತೊಲೆ ಚಿನ್ನದ ಬೋರಮಾಳ ಸರ, ಅರ್ಧ ತೊಲೆ ಮೂಗಿನ ರಿಂಗ್ ಸೇರಿದಂತೆ ₹ 2 ಲಕ್ಷ ಮೌಲ್ಯದ ಚಿನ್ನದ ಆಭರಣ, ₹ 20 ಸಾವಿರ ಮೌಲ್ಯದ ಬೆಳ್ಳಿಯ ಡಾಬು, ₹ 3 ಲಕ್ಷ ನಗದು ಸೇರಿದಂತೆ ₹ 5.20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. 

ADVERTISEMENT

₹ 1.29 ಲಕ್ಷ ಮೊತ್ತದ ಚಿನ್ನಾಭರಣ ಕಳವು

ತಾಲ್ಲೂಕಿನ ನಂದೂರ (ಕೆ) ತಾಂಡಾದ ಸವಿತಾ ಸೋಮು ರಾಠೋಡ ಎಂಬುವವರ ಮನೆಯ ಕೀಲಿ ಮುರಿದು ₹ 1.29 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ. ಅಲ್ಮೇರಾದಲ್ಲಿ ಇಟ್ಟಿದ್ದ ₹ 40 ಸಾವಿರ ಮೌಲ್ಯದ ಆರು ಗ್ರಾಂ ಚಿನ್ನದ ಜುಮುಕಿ, ₹ 40 ಸಾವಿರ ಮೌಲ್ಯದ 4 ಗ್ರಾಂನ ಚಿನ್ನದ ಕಿವಿಯೋಲೆಗಳು, ಬೆಳ್ಳಿ ಹಾಗೂ ₹ 29 ಸಾವಿರ ನಗದು ಹಣ ಕಳ್ಳತನವಾಗಿದೆ ಎಂದು ವಿಶ್ವವಿದ್ಯಾಲಯ ಠಾಣೆಯಲ್ಲಿ ದೂರು ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.