ಬಂಧನ
(ಪ್ರಾತಿನಿಧಿಕ ಚಿತ್ರ)
ಕಲಬುರಗಿ: ತಾಲ್ಲೂಕಿನ ನಂದೂರ (ಕೆ) ತಾಂಡಾದ ನಿವಾಸಿ ಧರ್ಮಪಾಲ ಕಿಶನ ರಾಠೋಡ ಎಂಬುವವರ ಮನೆಯ ಬಾಗಿಲು ಮುರಿದ ಕಳ್ಳರು ಅಲ್ಮೇರಾದಲ್ಲಿ ಇರಿಸಿದ್ದ ಒಂದು ತೊಲೆ ಮಂಗಳಸೂತ್ರ, ಒಂದು ತೊಲೆ ಚಿನ್ನದ ಬೋರಮಾಳ ಸರ, ಅರ್ಧ ತೊಲೆ ಮೂಗಿನ ರಿಂಗ್ ಸೇರಿದಂತೆ ₹ 2 ಲಕ್ಷ ಮೌಲ್ಯದ ಚಿನ್ನದ ಆಭರಣ, ₹ 20 ಸಾವಿರ ಮೌಲ್ಯದ ಬೆಳ್ಳಿಯ ಡಾಬು, ₹ 3 ಲಕ್ಷ ನಗದು ಸೇರಿದಂತೆ ₹ 5.20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
₹ 1.29 ಲಕ್ಷ ಮೊತ್ತದ ಚಿನ್ನಾಭರಣ ಕಳವು
ತಾಲ್ಲೂಕಿನ ನಂದೂರ (ಕೆ) ತಾಂಡಾದ ಸವಿತಾ ಸೋಮು ರಾಠೋಡ ಎಂಬುವವರ ಮನೆಯ ಕೀಲಿ ಮುರಿದು ₹ 1.29 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ. ಅಲ್ಮೇರಾದಲ್ಲಿ ಇಟ್ಟಿದ್ದ ₹ 40 ಸಾವಿರ ಮೌಲ್ಯದ ಆರು ಗ್ರಾಂ ಚಿನ್ನದ ಜುಮುಕಿ, ₹ 40 ಸಾವಿರ ಮೌಲ್ಯದ 4 ಗ್ರಾಂನ ಚಿನ್ನದ ಕಿವಿಯೋಲೆಗಳು, ಬೆಳ್ಳಿ ಹಾಗೂ ₹ 29 ಸಾವಿರ ನಗದು ಹಣ ಕಳ್ಳತನವಾಗಿದೆ ಎಂದು ವಿಶ್ವವಿದ್ಯಾಲಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.