ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನಲ್ಲಿ ಸೋಮವಾರ ಭಾರಿ ಮಂಜು ಕವಿದು ರಸ್ತೆಗಳು, ಗಿಡಮರಗಳು, ಪಕ್ಷಿಗಳು ಮತ್ತು ಕಟ್ಟಡಗಳು ಕಾಣದಂತಾಗಿದೆ. ಬೆಳಿಗ್ಗೆ ವಾಯುವಿಹಾರಕ್ಕೆ ತೆರಳುವವರು ಮೊಬೈಲ್ ಟಾರ್ಚ್ ಹಾಕಿಕೊಂಡು ವಿಹಾರಕ್ಕೆ ತೆರಳಿದರೆ, ಬೈಕ್ ಸೇರಿದಂತೆ ವಾಹನ ಸವಾರರು ಹೆಡ್ ಲೈಟ್ ಹಾಕಿಕೊಂಡು ಸಂಚರಿಸುತ್ತಿರುವುದು ಗೋಚರಿಸಿತು.
ಹಾಲು ಮಾರಾಟಗಾರರು, ಪತ್ರಿಕೆ ವಿತರಕರು ಕೂಡ ಮಂಜಿನ ಮುಸುಕಿನಲ್ಲಿ ಸಂಚರಿಸಿ ತಮ್ಮ ಕಾಯಕ ನಿರ್ವಹಿಸಿದರು.
'ಸದ್ಯ ಇದರಿಂದ ಯಾವುದೇ ಆಪತ್ತು ಇಲ್ಲ. ಆದರೆ ತೊಗರಿ ಹೂವಾಡುವ ವೇಳೆಗೆ ಮಂಜು ಬಡಿದರೆ ಹೂ ಉದುರುವ ಸಾಧ್ಯತೆ ಹೆಚ್ಚು' ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅನಿಲಕುಮಾರ ರಾಠೋಡ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.