ADVERTISEMENT

ಗುಡುಗು ಸಹಿತ ಮಳೆ: ಸಿಡಿಲಿಗೆ 2 ಎತ್ತುಗಳು ಬಲಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 19:17 IST
Last Updated 24 ಮಾರ್ಚ್ 2019, 19:17 IST

ಜೇವರ್ಗಿ (ಕಲಬುರ್ಗಿ): ತಾಲ್ಲೂಕಿನ ಅರಳಗುಂಡಗಿಯಲ್ಲಿ ಭಾನುವಾರ ಸಂಜೆ ಸುಮಾರು ಹತ್ತು ನಿಮಿಷ ಗುಡುಗು ಸಹಿತ ಮಳೆಯಾಯಿತು. ಸಿಡಿಲು ಬಡಿದು ಗಂಗಾಧರ ವಿಶ್ವಕರ್ಮ ಅವರಿಗೆ ಸೇರಿದ ಸುಮಾರು ₹1.20 ಲಕ್ಷ ಮೌಲ್ಯದ ಎರಡು ಎತ್ತುಗಳು ಮೃತಪಟ್ಟಿವೆ.

ಅರಳಗುಂಡಗಿ ವೈದ್ಯಾಧಿಕಾರಿ ಡಾ.ಸಂತೋಷ ಹಿರೇಗೌಡರ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿದರು.

ಪುಜಲಪುರ ವರದಿ: ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಬಿರುಗಾಳಿ ಸಮೇತ ಮಳೆ ಸುರಿಯಿತು. ಅಪುಜಲಪುರ ಪಟ್ಟಣ, ಚವಡಾಪುರ, ಹಸರಗುಂಡಗಿ ಸೇರಿದಂತೆ ಕೆಲವೆಡೆ ಸುಮಾರು 15 ನಿಮಿಷ ಸುರಿದ ಮಳೆ ತಂಪೆರೆಯಿತು.

ADVERTISEMENT

ಕೊಡಗು ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದೆ. ಕಕ್ಕಬ್ಬೆ ಸುತ್ತಮುತ್ತ ಅರ್ಧ ಗಂಟೆ ಜೋರು ಮಳೆ ಸುರಿದಿದೆ. ನಾಪೋಕ್ಲು, ಕಕ್ಕಬ್ಬೆ, ಭಾಗಮಂಡಲ ಹಾಗೂ ತಲಕಾವೇರಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮಳೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.