ಚಿಂಚೋಳಿ: ತಾಲ್ಲೂಕಿನಲ್ಲಿ ಶನಿವಾರ ಬೆಳಗಿನ ಜಾವ ಮಂಜು ಆವರಿಸಿ ರಸ್ತೆಗಳು, ಕಟ್ಟಡಗಳು ಮತ್ತು ಗಿಡಮರಗಳು ಕಾಣದಂತಾಗಿದ್ದವು.
ನಸುಕಿನ 2ಗಂಟೆ ಆವರಿಸಲು ಆರಂಭವಾಗಿ ಬೆಳಗಿನ ಜಾವ 5ರಿಂದ6 ಗಂಟೆ ಸಮಯದಲ್ಲಿ ದಟ್ಟ ಮಂಜು ಆವರಿಸಿದೆ. ಇದರಿಂದ ವಾಯು ವಿಹಾರಕ್ಕೆ ತೆರಳುವವರು, ಹಾಲು ತರಲು ಹೋಗುವವರು, ಪತ್ರಿಕೆ ಹಂಚುವವರು, ತಾಲ್ಲೂಕಿನ ವಿವಿಧ ಸಿಮೆಂಟ್ ಕಂಪೆನಿಗಳಿಗೆ ತೆರಳುವ ನೌಕರರು ತಮ್ಮ ವಾಹನಗಳಿಗೆ ಲೈಟ್ ಆನ್ ಮಾಡಿಕೊಂಡು ಹೋಗುವುದು ಅನಿವಾರ್ಯವಾಗಿತ್ತು.
ಬೆಳಿಗ್ಗೆ 7 ಗಂಟೆ ಆದರೂ ಮಂಜಿನ ಛಾಯೆ ಮುಂದುವರೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.