ADVERTISEMENT

ಎಲ್ಲೆಡೆಯೂ ಮಂಜು ಕವಿದ ವಾತಾವರಣ: ಬೆಳಗಾದರೂ ಕಾಣದ ರಸ್ತೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 2:46 IST
Last Updated 22 ಅಕ್ಟೋಬರ್ 2020, 2:46 IST
ಮಂಜು ಆವರಿಸಿಕೊಂಡಿರುವ ದೃಶ್ಯ
ಮಂಜು ಆವರಿಸಿಕೊಂಡಿರುವ ದೃಶ್ಯ   
""

ಸೇಡಂ (ಕಲಬುರ್ಗಿ ಜಿಲ್ಲೆ): ಗುರುವಾರ ಬೆಳಗಿನ ಜಾವ ಆವರಿಸಿದ ಮಂಜಿನಿಂದಾಗಿ ಸೇಡಂನ ರಸ್ತೆಗಳು ಗೋಚರಿಸಲಿಲ್ಲ.

ಬೆಳಿಗ್ಗೆ 4 ಗಂಟೆಯಿಂದ ನಿರಂತರವಾಗಿ ಮಂಜಿನ ವಾತಾವರಣ ಮೂಡಿದ್ದು ಬೆಳಗಾದರೂ ಮಬ್ಬಿನ ವಾತಾವರಣ ಇಳಿಯಲಿಲ್ಲ.

3 ಗಂಟೆಗೂ ಅಧಿಕ ಕಾಲ ಮಂಜು ಕವಿದ ವಾತಾವರಣ ಸೃಷ್ಟಿಯಾಗಿತ್ತು.

ADVERTISEMENT

ಹೊಗೆಯಂತೆ ಎಲ್ಲೆಡೆಯೂ ಗೋಚರಿಸುತ್ತಿದ್ದ ಇದು, ಬೆಳಗಿನ ವಾಯುವಿಹಾರಿಗಳಿಗೆ,ವಾಹನ ಸಂಚಾರರಿಗೆ ಹಾಗೂ ಪತ್ರಿಕಾ ವಿತರಕರಿಗೆ ಸೇರಿಸಂತೆ ಅನೇಕರಿಗೆ ತೊಂದರೆಯುಂಟಾಯಿತು. ಸೇಡಂನಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಮಬ್ಬು ಕವಿದ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ ನಿವಾಸಿ ಶರಣಪ್ಪ.

ಮಂಜು ಕವಿದ ವಾತಾವರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.