ADVERTISEMENT

ಕಲಬುರಗಿ: ವಿಷ ಕುಡಿಸಿ ಪತ್ನಿ ಕೊಲ್ಲಲು ಯತ್ನ, ಪತಿಗೆ 3 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 7:30 IST
Last Updated 21 ಮಾರ್ಚ್ 2023, 7:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಅಫಜಲಪುರ ತಾಲ್ಲೂಕಿನ ಕುಲಾಲಿ ಸ್ಟೇಶನ್‌ ನಿವಾಸಿ ಅಶ್ವಿನಿ ಕೊರಳ್ಳಿ ಎಂಬುವವರಿಗೆ ವಿಚ್ಛೇದನ ನೀಡುವಂತೆ ಪೀಡಿಸಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ ಪತಿ ಶರಣಪ್ಪ ಕೊರಳ್ಳಿ ಎಂಬಾತನಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಕಲಬುರಗಿಯಲ್ಲಿರುವ ಪತಿ ಶರಣಪ್ಪನ ಮನೆಯಲ್ಲಿ ಹೊಂದಾಣಿಕೆ ಯಾಗದ್ದಕ್ಕೆ ಅಶ್ವಿನಿ ಮರಳಿ ತವರೂರಾದ ಕುಲಾಲಿಗೆ ಬಂದಿದ್ದರು. 2019ರ ಫೆಬ್ರುವರಿ 21ರಂದು ಜೀಪ್‌ನಲ್ಲಿ ಕುಲಾಲಿಗೆ ಬಂದ ಶರಣಪ್ಪ ಕೊರಳ್ಳಿ, ಆತನ ತಂದೆ ಅಂಬಾರಾಯ, ತಮ್ಮ ವಾಸುದೇವ ಹಾಗೂ ಶರಣಪ್ಪನ ತಂಗಿ ಗೌರಮ್ಮ ಸೇರಿಕೊಂಡು ಅಶ್ವಿನಿಯನ್ನು ನಿಂದಿಸಲಾರಂಭಿಸಿದರು. ಈ ಸಂದರ್ಭ ದಲ್ಲಿ ತನಗೆ ವಿಚ್ಛೇದನ ನೀಡಬೇಕು. ಇಲ್ಲವಾದರೆ ಕೊಲೆ ಮಾಡುತ್ತೇನೆ ಎಂದು ಶರಣಪ್ಪ ಬೆದರಿಕೆ ಹಾಕಿದ್ದ. ಇದಕ್ಕೆ ಆತನ ತಂದೆ ಅಂಬಾರಾಯ ಸಾಥ್ ನೀಡಿದ್ದರು. ಜೀಪ್‌ನಲ್ಲಿಟ್ಟಿದ್ದ ವಿಷದ ಬಾಟಲಿಯನ್ನು ಅಶ್ವಿನಿಗೆ ಕುಡಿಸಲು ಮುಂದಾದ. ಈ ಸಂದರ್ಭದಲ್ಲಿ ಅದನ್ನು ಗಮನಿಸಿದ ಸಾರ್ವಜನಿಕರು ಬಿಡಿಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದ ರೇವೂರ ಪಿಎಸ್‌ಐ ಮಲ್ಲಣ್ಣ ಯಲಗೋಡ ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ ಕರೋಶಿ, ಮೊದಲ ಅಪರಾಧಿ ಶರಣಪ್ಪನಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ, ಇತರ ಅಪರಾಧಿಗಳಿಗೆ ಮೂರು ತಿಂಗಳು ಜೈಲು ಹಾಗೂ ತಲಾ ₹ 3 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು.

ಸರ್ಕಾರದ ಪರವಾಗಿ ಮೂರನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.