ADVERTISEMENT

ಕಲಬುರಗಿ: ಪತ್ರಕರ್ತ, ಸಾಹಿತಿ ಪ್ರಭುಲಿಂಗ ನೀಲೂರೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 10:50 IST
Last Updated 31 ಜನವರಿ 2026, 10:50 IST
<div class="paragraphs"><p>ಭುಲಿಂಗ ನೀಲೂರೆ</p></div>

ಭುಲಿಂಗ ನೀಲೂರೆ

   

ಕಲಬುರಗಿ: ಪತ್ರಕರ್ತರೊಬ್ಬರು ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ಹೊರವಲಯದ ಸೈಯದ್ ಚಿಂಚೋಳಿ ಮಾರ್ಗದ ಅಷ್ಟಗಾ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ನಗರದ ಬಸ್ ಡಿಪೊ-2ರ ಬಳಿಯ ನಿವಾಸಿ ಪ್ರಭುಲಿಂಗ ನೀಲೂರೆ (52) ಆತ್ಮಹತ್ಯೆ ಮಾಡಿಕೊಂಡವರು.

ADVERTISEMENT

ರಾಜ್ಯಮಟ್ಟದ ‌ಪ್ರಮುಖ ಪತ್ರಿಕೆಯ ಕಲಬುರಗಿ ಕಚೇರಿಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ನೀಲೂರೆ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾಹಿತಿಯೂ ಆಗಿದ್ದ ಪ್ರಭುಲಿಂಗ ನೀಲೂರೆ ಹಲವು ಕೃತಿಗಳನ್ನು ಬರೆದಿದ್ದಾರೆ. ಆಳಂದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ‌ದ್ದರು.

ಪ್ರಭುಲಿಂಗ ಆಳಂದ ತಾಲ್ಲೂಕಿನ ಹಳಿಸಲಗರ ಗ್ರಾಮದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.