ADVERTISEMENT

ಕಲಬುರ್ಗಿ: ಗೈರಾದದ್ದಕ್ಕೆ ಮುಖ್ಯ ಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 16:25 IST
Last Updated 28 ಆಗಸ್ಟ್ 2021, 16:25 IST

ಕಲಬುರ್ಗಿ: ಅನಧಿಕೃತವಾಗಿ ಗೈರು ಹಾಜರಾದ ಜೇವರ್ಗಿ ತಾಲ್ಲೂಕಿನ ಮುತ್ತಕೋಡ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಿಯೋಜಿತ ಪ್ರಭಾರ ಮುಖ್ಯ ಶಿಕ್ಷಕ ಕಾಂತು ಪವಾರ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದರಾ ಅಮಾನತು ಮಾಡಿದ್ದಾರೆ.

ಇದೇ 24ರಂದು ತಾಂಡಾದ ಶಾಲೆಗೆ ದಿಢೀರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂತು ಶಾಲೆಗೆ ಬಂದಿರಲಿಲ್ಲ. ಅಲ್ಲದೇ, ಎರಡು ಕೊಠಡಿಗಳಿಗೆ ಬೀಗ ಹಾಕಿತ್ತು. ಶಾಲಾ ಆವರಣ ಅವ್ಯವಸ್ಥಿತವಾಗಿತ್ತು. ಕೋವಿಡ್ ಪ್ರಯುಕ್ತ ಶಾಲಾ ಆವರಣವನ್ನು ಸ್ಯಾನಿಟೈಜ್ ಮಾಡಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದರೂ ಅದನ್ನು ಪಾಲನೆ ಮಾಡಿರಲಿಲ್ಲ ಎಂದು ಬಿಇಒ ವೆಂಕಯ್ಯ ತಿಳಿಸಿದ್ದಾರೆ.

ಮಂದೇವಾಲ ವಲಯದ ಶಿಕ್ಷಣ ಸಂಯೋಜಕ ವಿಜಯಕುಮಾರ ನೀಡಿದ ವರದಿಯನ್ನು ಆಧರಿಸಿ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.