ADVERTISEMENT

ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ: ಹರಿದುಬಂದ ಯುವಜನರು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 6:49 IST
Last Updated 16 ಏಪ್ರಿಲ್ 2025, 6:49 IST
   

ಕಲಬುರಗಿ: ನಗರದ ರಿಂಗ್‌ ‌ರಸ್ತೆಯಲ್ಲಿರುವ ಖಮರ್ ಉಲ್‌ಇಸ್ಲಾಂ ಕಾಲೊನಿಯ ಕೆ.ಸಿ.ಟಿ ಕಾಲೇಜು ಆವರಣದಲ್ಲಿ ರಾಜ್ಯ ಸರ್ಕಾರದಿಂದ‌ ಬುಧವಾರ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ ಮೇಳಕ್ಕೆ ಯುವ ಜನರು ಕೆಲಸ ಪಡೆಯುವ ಉಮೇದಿನೊಂದಿಗೆ ಹರಿದು ಬಂದರು.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಯುವಜನರು ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಒಂದೇ ದಿನದಲ್ಲಿ ಹಲವು ಕಂಪನಿಗಳ ಸಂದರ್ಶನ‌ ಎದುರಿಸಿದರು.

ಆನ್‌ಲೈನ್‌ನಲ್ಲಿ ನೋಂದಣಿ ‌ಮಾಡಿಕೊಳ್ಳದ ಯುವಜನರು ಸ್ಥಳದಲ್ಲೇ ಆಫ್‌ಲೈನ್‌ನಲ್ಲಿ ನೋಂದಣಿ‌ ಮಾಡಿಕೊಂಡು‌ ಸಂದರ್ಶ‌ನದಲ್ಲಿ ಪಾಲ್ಗೊಂಡರು.

ADVERTISEMENT

200 ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದು, ಬೆಳಿಗ್ಗೆ 9ರಿಂದಲೇ ಅಭ್ಯರ್ಥಿಗಳ‌ ಸಂದರ್ಶನದಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.