ADVERTISEMENT

ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 13:48 IST
Last Updated 28 ಮಾರ್ಚ್ 2021, 13:48 IST
ಶ್ರೀಕಾಂತ ಗುಂಡೂರ
ಶ್ರೀಕಾಂತ ಗುಂಡೂರ   

ಕಮಲಾಪುರ: ಮಾರ್ಚ್ 26ರಂದು ರಾತ್ರಿ ಸಂಭವಿಸಿದ್ದ ಕಾರು- ಟ್ರ್ಯಾಕ್ಟರ್ ಮಧ್ಯದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ನವನಿಹಾಳ ಗ್ರಾಮದ ಶ್ರೀಕಾಂತ ಅಂಬಾರಾಯ ಗುಂಡೂರ (24) ಭಾನುವಾರ ಮೃತಪಟ್ಟರು.

ಶ್ರೀಕಾಂತ ಅವರೊಂದಿಗೆ ನವನಿಹಾಳ ಗ್ರಾಮದ ಶ್ರೀನಾಥ ಸುಭಾಷ ಬಿರಾದಾರ (26), ನಾಗರಾಜ ಬಸಂತರಾಯ ಬಿರಾದಾರ (28), ಹಾಗೂ ಡೋರ ಜಂಬಗಾದ ವಿಜಯಕುಮಾರ ಶ್ರೀಮಂತ (27), ಚಂದ್ರಕಾಂತ ದೇವಿಂದ್ರಪ್ಪ (27) ಸೇರಿ ರೇಣುಕಾಚಾರ್ಯ ಜಯಂತಿ ನಿಮಿತ್ತ ಕಾರಿನಲ್ಲಿ ತೆಲಂಗಾಣದ ಕೊಲ್ಲಿಪಾಕಿಗೆ ತೆರಳುತ್ತಿದ್ದರು. ಡೊಂಗರಗಾಂವ ಕ್ರಾಸ್ ಬಳಿ ಮೇವು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿಯಾಗಿದೆ. ಕಾರಿನಲ್ಲಿ ಎದುರು ಬದಿಯ ಆಸನದಲ್ಲಿ ಕುಳಿತಿದ್ದ ಶ್ರೀಕಾಂತ ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿತ್ತು. ದಿನ ಕಳೆದರೂ ಚೇತರಿಕೆ ಕಾಣಲಿಲ್ಲ. ಭಾನುವಾರ ಕೊನೆಯುಸಿರೆಳೆದರು. ಉಳಿದವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ರ್ಯಾಕ್ಟರ್ ಚಾಲಕ ಡೋರ್ ಜಂಬಗಾದ ಹುಸೇನಸಾಬ್ ಅಬ್ಬಾಸ ಅಲಿ (50) ಅವರಿಗೂ ತೀವ್ರ ಗಾಯಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.