ADVERTISEMENT

ಕಲ್ಲು ಎತ್ತಿ ಹಾಕಿ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 2:22 IST
Last Updated 12 ಏಪ್ರಿಲ್ 2022, 2:22 IST

ಕಲಬುರಗಿ: ನಗರದ ರಾಣೇಶ ಪೀರ್ ದರ್ಗಾ ಸಮೀಪ ಇರುವ ಎಸ್.ಎಂ. ಕೃಷ್ಣ ಕಾಲೊನಿಯಲ್ಲಿ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ದೀನದಯಾಳ್ ಕಾಲೊನಿ ನಿವಾಸಿ ಪಾಪ್ಯಾ ಅಲಿಯಾಸ್ ಉಮಾಕಾಂತ್ ಘೋಡಕೆ (22) ಎಂಬಾತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.

ಈತ ಕೆಲಸ ಮುಗಿಸಿಕೊಂಡು ತಡ ರಾತ್ರಿ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬೈಕ್ ಅಡ್ಡಗಟ್ಟಿದ ಕೊಲೆಗಾರರು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಕೆಳಗೆ ಬೀಳುತ್ತಿದ್ದಂತೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಮಾಕಾಂತ್ ಹಾಗೂ ಇತರೆ ನಾಲ್ವರ ಮಧ್ಯೆ ಈಚೆಗೆ ಜಗಳವಾಗಿತ್ತು. ಆ ವೇಳೆ ಕೊಲೆಯಾದ ಉಮಾಕಾಂತ್ ನಾಲ್ವರ ವಿರುದ್ಧ ದೂರು ನೀಡಿದ್ದನು. ಇದರಿಂದ ಸಿಟ್ಟಿಗೆದ್ದು ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.