ADVERTISEMENT

ಚಿತ್ತಾಪುರ: ರೈಲು ಹರಿದು 70 ಕುರಿಗಳು ಸಾವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 10:21 IST
Last Updated 7 ಅಕ್ಟೋಬರ್ 2022, 10:21 IST
ಮೊಗಲಾ ಗ್ರಾಮ ಸಮೀಪ ಕುರಿಗಳ ಮೇಲೆ ರೈಲು ಹರಿದಿರುವ ದೃಶ್ಯ
ಮೊಗಲಾ ಗ್ರಾಮ ಸಮೀಪ ಕುರಿಗಳ ಮೇಲೆ ರೈಲು ಹರಿದಿರುವ ದೃಶ್ಯ   

ಚಿತ್ತಾಪುರ(ಕಲಬುರಗಿ): ತಾಲ್ಲೂಕಿನ ಮೊಗಲಾ ಗ್ರಾಮ ಸಮೀಪದ ರೈಲು ಹಳಿ ಮೇಲೆ ಇದ್ದ ಕುರಿಗಳ ಮೇಲೆ ರೈಲು ಹರಿದು 70 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.

ಮಲ್ಲಪ್ಪ ಹಣಮಂತ, ರಾಘವೇಂದ್ರ ಉಮೇಶ ಬಡಿಗೇರ, ಶ್ರೀದೇವಿ ರಾಜು, ರಾಮಲಿಂಗ ಕಲ್ಲಪ್ಪ, ಗೌಸ್‌ಮಿಯ್ಯಾ ಇಮಾಮ್‌ಸಾಬ್, ಶಿವಕಾಂತಮ್ಮ ಅರ್ಜುನ ಮತ್ತು ಅಶೋಕ ಮೊಗಲಯ್ಯಾ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಿಂದ ಬರುತ್ತಿದ್ದ ಬೆಂಗಳೂರು-ನಾಂದೇಡ್ ಲಿಂಕ್ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ 12ರ ವೇಳೆಗೆ ಕುರಿಗಳ ಮೇಲೆ ಹರಿದಿದೆ.
ಸ್ಥಳಕ್ಕೆ ದಕ್ಷಿಣ ಮಧ್ಯ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT