ADVERTISEMENT

ಅವಘಡದಲ್ಲಿ ಗಾಯಗೊಂಡಿದ್ದ ಯುವಕನನ್ನು ರಕ್ಷಿಸಿದ ಸಂಸದ ಡಾ.ಜಾಧವ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 1:51 IST
Last Updated 10 ಏಪ್ರಿಲ್ 2021, 1:51 IST
ಉಮೇಶ್‌ ಜಾದವ್‌
ಉಮೇಶ್‌ ಜಾದವ್‌   

ಕಲಬುರ್ಗಿ: ಜಿಲ್ಲೆಯ ಕಮಲಾಪುರ ಹೊರವಲಯದಲ್ಲಿ ಶುಕ್ರವಾರ ರಾತ್ರಿ ಮರ ಬಿದ್ದು ಗಾಯಗೊಂಡಿದ್ದ ಯುವಕನನ್ನು ಸಂಸದ ಡಾ.ಉಮೇಶ ಜಾಧವ ರಕ್ಷಿಸಿದರು.

ಸಂಸದರು ಬಸವಕಲ್ಯಾಣ ಉಪಚುನಾವಣೆಯ ಪ್ರಚಾರದಿಂದ ಮರಳಿ ಕಲಬುರ್ಗಿಗೆ ಬರುತ್ತಿದ್ದ ವೇಳೆ ಕಮಲಾಪುರ ಸಮೀಪ ದೊಡ್ಡ ಮರ ಬಿದ್ದು ಬೈಕ್‌ ಸವಾರ ಗಾಯಗೊಂಡಿದ್ದ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಂಸದರು ವಾಹನ ನಿಲ್ಲಿಸಿ ನೋಡಿದಾಗ ಯುವಕ ಗಾಯಗೊಂಡು ಒದ್ದಾಡುತ್ತಿದ್ದ. ತಮ್ಮಲ್ಲಿದ್ದ ಪ್ರಥಮ ಚಿಕಿತ್ಸೆ ಸಲಕರಣೆಗಳನ್ನು ಬಳಸಿ ಉಪಚರಿಸಿದ ಜಾಧವ ಅವರು, ಆಂಬುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ಸಾಗಿಸಿದರು.

ಪ್ರಯಾಣಿಕರ ಸಹಾಯ ಪಡೆದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿದ್ದ ಮರವನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಮರದಲ್ಲಿ ಕಟ್ಟಿಕೊಂಡಿದ್ದ ಜೇನು ನೊಣಗಳು ಸಂಸದರು ಹಾಗೂ ಅಲ್ಲಿದ್ದ ಜನರಿಗೆ ಕಚ್ಚಿ ಗಾಯಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.