ಕಮಲಾಪುರ: ತಾಲ್ಲೂಕಿನ ನಾವದಗಿ (ಎಚ್ಕ್ಯೂ ಬೆಳಕೊಟಾ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿವೇಕಾನಂದ ಪಾಟೀಲ ಬೆಳಕೋಟಾ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಪಾಟೀಲ ನಾವದಗಿ ಭಾನುವಾರ ಅವಿರೋಧವಾಗಿ ಆಯ್ಕೆಯಾದರು.
ಶಾಸಕ ಬಸವರಾಜ ಮತ್ತಿಮೂಡ ನೇತೃತ್ವದಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಿ ನಾಮ ಪತ್ರ ಸಲ್ಲಿಸಿದ್ದು, ಸರ್ವ ಸಮ್ಮತವಾಗಿ ಆಯ್ಕೆ ಮಾಡಲಾಯಿತು.
ನಿರ್ದೇಶಕರಾದ ಶಾಂತವೀರ ಪಾಟೀಲ, ಮಲ್ಲಣ್ಣ ಹತ್ತಿ, ಗುಂಡಪ್ಪ ಮೋಳಕೇರಿ, ಶ್ರೀದೇವಿ ಸೋಮಶೇಖರ, ಬಾಬುರಾವ ದರ್ಗನ್, ರೇವಣಸಿದ್ದಪ್ಪ ಹುಡಗಿ, ಮುಖಂಡರಾದ ಬಸವರಾಜ ಪಾಟೀಲ ಬೆಳಕೋಟಾ, ಸುಜೀತ್ ಬಿರಾದಾರ, ಜ್ಯೋತಿಬಾ ಜಗದಾಳೆ, ಶಿವಕುಮಾರ ದೋಶೆಟ್ಟಿ, ಬಸವರಾಜ ದೋಶೆಟ್ಟಿ, ಜಾಕೀರ ಹುಸೇನ್, ಮಚ್ಚಿಂದ್ರ ಮಾಂಗ, ಸಿದ್ರಾಮಪ್ಪ ಕಡಗಂಚಿ, ಚೇತನ ಹೊಳಕುಂದಾ, ರಾಜಕುಮಾರ ಬೆಳಕೋಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.