ADVERTISEMENT

ಸಾರಿಗೆ ಸಂಸ್ಥೆ ಭದ್ರತಾ ಸಿಬ್ಬಂದಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 5:23 IST
Last Updated 26 ಜನವರಿ 2021, 5:23 IST

ಕಲಬುರ್ಗಿ: ಇಲ್ಲಿನ ಎನ್‌ಇಕೆಆರ್‌ಟಿಸಿ ಕಚೇರಿ ಸಾರಿಗೆ ಸದನದ ಹಿಂಭಾಗದ ಬಸ್ ನಿಲ್ದಾಣದ ಶೆಲ್ಟರ್‌ನಲ್ಲಿ ಸಂಸ್ಥೆಯ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಯುವಕ ಸೋಮವಾರ ನೇಣಿಗೆ ಶರಣಾಗಿದ್ದಾರೆ.

ಅಫಜಲಪುರದ ನಿವಾಸಿ ನಾಗರಾಜ ರಾಜಶೇಖರ ಲೋಕಪಲ್ಲಿ (30) ಮೃತ ಯುವಕ.

ನಿತ್ಯ ಅಫಜಲಪುರದಿಂದ ಕಲಬುರ್ಗಿಗೆ ಬಂದು ಹೋಗುತ್ತಿದ್ದರು. ಎಂದಿನಂತೆ ಭಾನುವಾರ ಸಂಜೆಯೂ ಕೆಲಸಕ್ಕೆ ಹಾಜರಾಗಿದ್ದ. ಬೆಳಿಗ್ಗೆ ಸಾರ್ವಜನಿಕ ಓಡಾಟ ಹೆಚ್ಚಿರದ ಬಸ್ ನಿಲ್ದಾಣದ ಶೆಲ್ಟರ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.