ADVERTISEMENT

ಪಿಎಸ್ಐ ನೇಮಕಾತಿ ಹಗರಣ: ಆರ್.ಡಿ.ಪಾಟೀಲಗೆ ಸುಪ್ರೀಂ ಕೋರ್ಟ್ ಜಾಮೀನು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 5:07 IST
Last Updated 20 ನವೆಂಬರ್ 2025, 5:07 IST
ಆರ್.ಡಿ.ಪಾಟೀಲ
ಆರ್.ಡಿ.ಪಾಟೀಲ   

ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲಗೆ ಸುಪ್ರೀಂ ಕೋರ್ಟ್ ‌ ಮೂರು ವಾರಗಳ ಮಧ್ಯಂತರ ‌ಜಾಮೀನು ಮಂಜೂರು ಮಾಡಿದೆ.

'ಮಗಳ‌‌ ಮದುವೆ‌ ಸಮಾರಂಭದ ಧಾರ್ಮಿಕ ‌ವಿಧಿಗಳನ್ನು ಡಿ.4ರೊಳಗೆ ಪೂರೈಸಬೇಕಿದ್ದು, ಮಧ್ಯಂತರ ಜಾಮೀನು ಮಂಜೂರು ‌ಮಾಡಬೇಕು' ಎಂದು ಆರೋಪಿ ಆರ್.ಡಿ.ಪಾಟೀಲ ಸುಪ್ರೀಂಕೋರ್ಟ್ ಗೆ ಅರ್ಜಿ ‌ಸಲ್ಲಿಸಿದ್ದರು.

ಅರ್ಜಿ ‌ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ವಿನೋದ ಚಂದ್ರನ ಅವರ‌ ಏಕ ಸದಸ್ಯ‌ ನ್ಯಾಯಪೀಠವು, 'ಪ್ರಕರಣದಲ್ಲಿ ಈಗಾಗಲೇ ದೋಷಾರೋಪಣೆ ‌ಪಟ್ಟಿ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ‌ದೊಡ್ಡ ಸಂಖ್ಯೆಯಲ್ಲಿ ಸಾಕ್ಷಿದಾರರಿರುವ ಕಾರಣ ‌ವಿಚಾರಣೆಗೆ ಇನ್ನಷ್ಟು ‌ಕಾಲಾವಕಾಶ ಹಿಡಿಯುವ ಸಾಧ್ಯಗಳಿವೆ. ಹೀಗಾಗಿ ಅರ್ಜಿದಾರರಿಗೆ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಲು ಒಲವು ‌ತೋರುತ್ತದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ‌.

ADVERTISEMENT

'ಜಾಮೀನು ‌ಅವಧಿ‌ ಮುಗಿದ ಬೆನ್ನಲ್ಲೆ ಅರ್ಜಿದಾರರು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು' ಎಂದೂ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ‌ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.