ADVERTISEMENT

ಕಲಬುರಗಿ | ರಾಜೀವ ಜ್ಯೋತಿ ಸದ್ಭಾವನಾ ಯಾತ್ರೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 3:58 IST
Last Updated 14 ಆಗಸ್ಟ್ 2023, 3:58 IST
ಕಲಬುರಗಿಯಲ್ಲಿ ಭಾನುವಾರ ರಾಜೀವ ಜ್ಯೋತಿ ಸದ್ಭಾವನಾ ಯಾತ್ರೆಯನ್ನು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಅವರು ಬರಮಾಡಿಕೊಂಡರು. ಶಾಸಕ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಬಾಬುರಾವ ಜಾಗೀರದಾರ್, ಭೀಮರಾವ ಟಿ.ಟಿ., ಲಿಂಗರಾಜ ತಾರಫೈಲ್ ಇದ್ದರು
ಕಲಬುರಗಿಯಲ್ಲಿ ಭಾನುವಾರ ರಾಜೀವ ಜ್ಯೋತಿ ಸದ್ಭಾವನಾ ಯಾತ್ರೆಯನ್ನು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಅವರು ಬರಮಾಡಿಕೊಂಡರು. ಶಾಸಕ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಬಾಬುರಾವ ಜಾಗೀರದಾರ್, ಭೀಮರಾವ ಟಿ.ಟಿ., ಲಿಂಗರಾಜ ತಾರಫೈಲ್ ಇದ್ದರು   

ಕಲಬುರಗಿ: ನಗರದ ಕೋಟನೂರ ಮಠದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡರು 32ನೇ ವರ್ಷದ ರಾಜೀವ ಜ್ಯೋತಿ ಸದ್ಭಾವನಾ ಯಾತ್ರೆಯನ್ನು ಸ್ವಾಗತಿಸಿದರು.

ಕೋಟನೂರ ಮಠದ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಅವರು ಜ್ಯೋತಿ ಸ್ವೀಕರಿಸಿದರು. ಬಳಿಕ ಕಲಬುರಗಿಯಿಂದ ಹೈದರಾಬಾದ್‌ನತ್ತ ಜ್ಯೋತಿ ಯಾತ್ರೆ ಹೊರಟಿತು.

‘ಈ ಜ್ಯೋತಿ ಯಾತ್ರೆಯು ತಮಿಳುನಾಡಿನ ಪೆರಂಬದೂರಿನಲ್ಲಿ ಆರಂಭಗೊಂಡಿದ್ದು, ವಿವಿಧ ರಾಜ್ಯಗಳ ಜಿಲ್ಲಾ ಕೇಂದ್ರಗಳ ಮೂಲಕ ತೆರೆಳಲಿದೆ. ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಜನ್ಮ ದಿನದ ಅಂಗವಾಗಿ ನಡೆಯುತ್ತಿದ್ದು, ಹಲವು ರಾಜ್ಯಗಳನ್ನು ಹಾದು ನವದೆಹಲಿಯ ವೀರಭೂಮಿ ತಲುಪಲಿದೆ’ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.

ADVERTISEMENT

ಸಭೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಬಾಬುರಾವ ಜಾಗೀರದಾರ್, ಭೀಮರಾವ ಟಿ.ಟಿ., ಲಿಂಗರಾಜ ತಾರಫೈಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.