ಕಲಬುರಗಿ: ಇಲ್ಲಿನ ಅಂಬೇಡ್ಕರ್ ನಗರದ ಆಶ್ರಯ ಕಾಲೊನಿಯಲ್ಲಿ ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಮೂರು ಬೈಕ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಮೂರೂ ಬೈಕ್ಗಳು ಸಂಪೂರ್ಣವಾಗಿ ಸುಟ್ಟಿವೆ.
ಆಶ್ರಯ ಕಾಲೊನಿಯಲ್ಲಿ ಹಲವರು ಹೊಸ ವರ್ಷಾಚರಣೆ ಆಯೋಜನೆ ಮಾಡಿದ್ದರು. ತಡರಾತ್ರಿ 1 ಗಂಟೆಯವರೆಗೂ ಅಲ್ಲಲ್ಲಿ ಹಾಡು, ಕುಣಿತ, ಸಂಭ್ರಮಗಳು ನಡೆದೇ ಇದ್ದವು. ಅಲ್ಲಿಯವರೆಗೂ ಮನೆಗಳ ಮುಂದೆ ನಿಲ್ಲಿಸಿದ್ದ ಈ ಬೈಕುಗಳಿಗೆ ಏನೂ ಆಗಿರಲಿಲ್ಲ. ಆ ನಂತರ ಮನೆಯವರೆಲ್ಲ ಮಲಗಿದ ವೇಳೆ ಕಡಿಗೇಡಿಗಳು ಬೈಕ್ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.