ADVERTISEMENT

ಜೀಪ್‌ ಮಗುಚಿ ಇಬ್ಬರ ಸಾವು, 10 ಮಂದಿಗೆ ಗಾಯ

ವಾಹನದ ಟೈರ್‌ ಒಡೆದು ಸಂಭವಿಸಿದ ಅಪಘಾತ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 8:59 IST
Last Updated 4 ಮಾರ್ಚ್ 2020, 8:59 IST
ಚಿಂಚೋಳಿ ತಾಲ್ಲೂಕು ಯಲಮಾಮಡಿ ಮೋನು ನಾಯಕ ತಾಂಡಾ ಬಳಿ ವಾಹನ ಪಲ್ಟಿಯಾಗಿರುವುದು
ಚಿಂಚೋಳಿ ತಾಲ್ಲೂಕು ಯಲಮಾಮಡಿ ಮೋನು ನಾಯಕ ತಾಂಡಾ ಬಳಿ ವಾಹನ ಪಲ್ಟಿಯಾಗಿರುವುದು   

ಚಿಂಚೋಳಿ: ತಾಲ್ಲೂಕಿನ ಯಲಮಾಮಡಿ ಪುನರ್ವಸತಿ ಕೇಂದ್ರ–2 ಹಾಗೂ ಬೆನಕೆಪಳ್ಳಿ ನಡುವೆ ಇರುವ ಮೋನು ನಾಯಕ ತಾಂಡಾ ಬಳಿ ಸೋಮವಾರ ಜೀಪ್‌ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಯಲಮಾಮಡಿ ಪುನರ್ವಸತಿ ಕೇಂದ್ರದ ನಿವಾಸಿ ಶಾಮರಾವ ದೊಡ್ಮನಿ (65) ಮತ್ತು ಯಲಮಾಮಡಿ ಮೋನು ನಾಯಕ ತಾಂಡಾದ ಮೋತಿಬಾಯಿ (55) ಮೃತಪಟ್ಟಿದ್ದಾರೆ. ಶಾಮರಾವ್ ಸ್ಥಳದಲ್ಲಿಯೇ ಅಸುನೀಗಿದರೆ, ಮೋತಿಬಾಯಿ ಬೀದರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಇತರ 10 ಮಂದಿ ಗಾಯಗೊಂಡಿದ್ದು, ಇವರಲ್ಲಿ ಶಂಕರ ಹಾಗೂ ಇನ್ನೋರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.

ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣಕ್ಕೆ ವಾರದ ಸಂತೆಗೆ ತೆರಳಿದವರು ವಾಪಸ್ ಬರುವಾಗ ವಾಹನದ ಟೈರ್ ಒಡೆದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಧ್ಯಾಹ್ನ 3.30ರ ಸುಮಾರಿಗೆ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಕಲಬುರ್ಗಿ ಮತ್ತು ಬೀದರ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ADVERTISEMENT

ಡಿವೈಎಸ್ಪಿ ಇ.ಎಸ್. ವೀರಭದ್ರಯ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಎಚ್.ಎಂ. ಇಂಗಳೇಶ್ವರ, ಸಬ್ ಇನ್‌ಸ್ಪೆಕ್ಟರ್ ರಾಜಶೇಖರ ರಾಠೋಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.