ಚಿಂಚೋಳಿ: ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ಯುಗಾದಿ ಅಮಾವಾಸ್ಯೆಯಂದುರಾಷ್ಟ್ರೀಯ ಸ್ವಯಂ ಸೇವಕ ಸಂಘವು ಯುಗಾದಿ ಉತ್ಸವ ಶುಕ್ರವಾರ ನಡೆಯಿತು.
ಇದೇ ವೇಳೆ 160ಕ್ಕೂ ಹೆಚ್ಚು ಯುವಕರು ಪಥಸಂಚಲನ ನಡೆಸಿದರು. ಗ್ರಾಮದ ಮುಖ್ಯರಸ್ತೆಯಲ್ಲಿ ವಾದ್ಯ ಬಾರಿಸುತ್ತ ಭಗವಾ ಧ್ವಜ ಹಿಡಿದು ಪಥ ಸಂಚಲನ ನಡೆಸಿದರು. ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗ ಕಾರ್ಯವಾಹ ಡಾ. ನಾಗರಾಜ ಮನ್ನೆ ಅವರು ಮಾತನಾಡಿ ದೇಶ ಹಾಗೂ ಧರ್ಮದ ಬಗೆಗೆ ಅಭಿಮಾನ ಬೆಳೆಸಿಕೊಳ್ಳುವುದರ ಜತೆಗೆ ಹಿಂದೂ ಸಾಂಸ್ಕೃತಿಕ ಪರಂಪರೆಯ ಹಿರಿಮೆ ಕುರಿತು ವಿವರಿಸಿದರು.
ಮಾಜಿ ಸೈನಿಕ ಶಾಮರಾವ್ ಮತ್ತು ಕಲಬುರಗಿ ಜಿಲ್ಲಾ ಸಂಘ ಚಾಲಕ ಅಶೋಕ ಪಾಟೀಲ ಮೊದಲಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.