ಕಲಬುರ್ಗಿ: ಸಂಬಂಧಿಕರ ಮದುವೆ ಸಮಾರಂಭದ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿರುವಾಗಲೇ ಯುವಕನ ಪ್ರಾಣ ಪಕ್ಷಿ ಹಾರಿಹೋಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಅಶೋಕ (24)ಎಂಬ ಯುವಕನೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನವೆಂಬರ್ 30ರಂದು ರಾತ್ರಿ ಯುವಕ ನೃತ್ಯ ಮಾಡುವಾಗಲೇ ಸಾವಿಗೀಡಾಗಿದ್ದು, ಸಾವಿನ ಕೊನೆಯ ಕ್ಷಣಗಳು ಮೊಬೈಲ್ ಕ್ಯಾಮೆರದಾಲ್ಲಿ ಸೆರೆಯಾಗಿವೆ. ರಾತ್ರಿ ಸಮಯದಲ್ಲಿ ಸಾಕಷ್ಟು ಹೊತ್ತು ಡ್ಯಾನ್ಸ್ ಮಾಡಿದ ಅಶೋಕ ದಿಢೀರನೆ ಕೆಳಗೆ ಬೀಳುತ್ತಾನೆ. ಏನಾಯ್ತು ಅಂತ ನೋಡನೋಡುತ್ತಿದ್ದಂತೆ ಬಾರದ ಕೊನೆಯುಸಿರೆಳೆಯುತ್ತಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.