ADVERTISEMENT

ಎಸಿಬಿ ಬಲೆಗೆ ನಗರಸಭೆ ಬಿಲ್‌ಕಲೆಕ್ಟರ್‌

ನಿರಾಶ್ರಿತರಿಗೆ ಮನೆ ಕೊಡಿಸುವುದಾಗಿ ₹ 25 ಸಾವಿರ ಲಂಚಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 12:44 IST
Last Updated 5 ಜೂನ್ 2020, 12:44 IST
ಲೋಹಿತ್‌ಕುಮಾರ್‌
ಲೋಹಿತ್‌ಕುಮಾರ್‌   

ಮಡಿಕೇರಿ: ನಿರಾಶ್ರಿತರೊಬ್ಬರಿಗೆ ಮನೆ ಕೊಡಿಸುವುದಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ನಗರಸಭೆಯ ಬಿಲ್‌ಕಲೆಕ್ಟರ್‌ ಎ.ಜಿ.ಲೋಹಿತ್‌ಕುಮಾರ್‌ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ಬಲೆಗೆ ಬಿದ್ದಿದ್ದಾರೆ.

ಇಂದಿರಾ ನಗರದ ಎಚ್‌.ಎಸ್‌.ಗಣೇಶ್‌ ಅವರ ಮನೆಯು 2018ರ ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಕುಸಿದಿತ್ತು. ಜೂನ್‌ 4ರಂದು ವಿತರಣೆ ಮಾಡಿದ್ದ ಮನೆಯಲ್ಲಿ ಗಣೇಶ್‌ ಅವರಿಗೂ ಮನೆ ನಿಗದಿಯಾಗಿತ್ತು. ಲೋಹಿತ್‌ಕುಮಾರ್‌, ನಾನೇ ಮನೆ ಕೊಡಿಸಿದ್ದೇನೆಂದು ಹೇಳಿ, ₹ 25 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಮುಂಗಡವಾಗಿ ₹ 5 ಸಾವಿರ ಪಡೆದುಕೊಂಡಿದ್ದು, ಶುಕ್ರವಾರ ಉಳಿಕೆ ₹ 20 ಸಾವಿರ ಲಂಚವನ್ನು ಎಪಿಎಂಸಿ ಆವರಣದಲ್ಲಿ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬಂಧಿತನಿಂದ ₹ 20 ಸಾವಿರ ಹಣ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ADVERTISEMENT

ಮೈಸೂರು ವಲಯ ಎಸ್‌ಪಿ ರಶ್ಮಿ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಭ್ರಷ್ಟಾಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.