ADVERTISEMENT

ಮಂತ್ರಾಲಯಕ್ಕೆ ತೆರಳಿದ್ದ ಸೋಮವಾರಪೇಟೆಯ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 4:43 IST
Last Updated 15 ಜುಲೈ 2025, 4:43 IST
ಅಜಿತ್
ಅಜಿತ್   

ಸೋಮವಾರಪೇಟೆ: ಮಂತ್ರಾಲಯ‌ದ ತುಂಗಭದ್ರಾ ನದಿಯ ಸ್ನಾನಘಟ್ಟದಲ್ಲಿ ಮುಳುಗಿ ಮೃತಪಟ್ಟ ತಾಲ್ಲೂಕಿನ ಸಂಗಯ್ಯನಪುರ ಗ್ರಾಮದ ಕೃಷಿಕ ರಮೇಶ್ ಅವರ ಪುತ್ರ ಕೆ.ಆರ್. ಅಜಿತ್ (20) ಅಂತ್ಯಕ್ರಿಯೆ ಸೋಮವಾರ ನಡೆಯಿತು.

ಸ್ನೇಹಿತರೊಂದಿಗೆ ತೆರಳಿದ್ದ ಮಂತ್ರಾಲಯ‌ದ ರಾಘವೇಂದ್ರಸ್ವಾಮಿ ದೇವಾಲಯ‌ಕ್ಕೆ ತೆರಳಿದ್ದ ಅಜಿತ್‌ ಸ್ನಾನಘಟ್ಟದಲ್ಲಿ‌ ಮುಳುಗಿ ಮೃತಪಟ್ಟಿದ್ದರು.

ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಅಜಿತ್‌ ಜುಲೈ 11ರಂದು ಮಂತ್ರಾಲಯಕ್ಕೆ ಪ್ರವಾಸ ತೆರಳಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.